ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ವತಿಯಿಂದ ಗ್ರಾಮ ವಿಕಾಸ ಯೋಜನೆಯ ಸದಸ್ಯರಿಗೆ ವಿಮಾ ಮೊತ್ತದ ಚೆಕ್ ಹಸ್ತಾಂತರ

0

ವಿಟ್ಲ: ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಆರ್ಯಾಪು ಗ್ರಾಮದ ಒಡಿಯೂರು ಶ್ರೀ ನಿಧಿ ವಿಕಾಸ ವಾಹಿನಿ ಸ್ವಸಹಾಯ ಸಂಘ ಸದಸ್ಯರಾದ ಮೋಹನ್ ಎಮ್ ಕೆ. ರವರು ಇತ್ತೀಚೆಗೆ ನಿಧನರಾಗಿದ್ದು, ಅವರ ನಷ್ಟ ಪರಿಹಾರ ನಿಧಿ ಮೊತ್ತದ ಹತ್ತು ಸಾವಿರ ರೂಪಾಯಿ ಮೊತ್ತದ ಚೆಕ್ ನ್ನು ವಾರೀಸುದಾರರಾದ ಪ್ರೇಮಲತಾ.ಬಿ. ರವರಿಗೆ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ನಿರ್ದೇಶಕರಾದ ಜಯಪ್ರಕಾಶ್ ರೈ ನೂಜಿಬೈಲುರವರು ಹಸ್ತಾಂತರ ಮಾಡಿದರು.

ಈ‌ ಸಂದರ್ಭದಲ್ಲಿ ಪುತ್ತೂರು ಶಾಖಾ ವ್ಯವಸ್ಥಾಪಕರಾದ ಪವಿತ್ರ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಪುತ್ತೂರು ತಾಲೂಕು ಮೇಲ್ವಿಚಾರಕರಾದ ಸವಿತಾ ರೈ, ಕುಂಬ್ರ ವಲಯ ಸಂಯೋಜಕಿ ಜಯಂತಿ ಜಿ., ಆರ್ಯಾಪು ಗ್ರಾಮದ ಸೇವಾದೀಕ್ಷಿತರಾದ ಪ್ರತಿಭಾ ಹಾಗೂ ಪುತ್ತೂರು ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here