ನೆಲ್ಯಾಡಿ: ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಸಮೀಪದ ಗರಡಿ ನಿವಾಸಿ ಲಕ್ಷ್ಮಣ ಗೌಡ (67ವ.)ರವರು ಅಲ್ಪಕಾಲದ ಅನಾರೋಗ್ಯದಿಂದ ಜು.25ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.
ಲಕ್ಷ್ಮಣ ಗೌಡ ಅವರು ಲಾರಿ ಹಾಗೂ ಹಿಟಾಚಿ ಹೊಂದಿದ್ದರು. ಸರಳ ಸ್ವಭಾವದ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಇತ್ತೀಚಿನ ಕೆಲ ದಿನಗಳಿಂದ ಅವರು ಅನಾರೋಗ್ಯಪೀಡಿತರಾಗಿದ್ದರು. ಮೃತರು ಪತ್ನಿ ರತ್ನಾವತಿ ಪತ್ನಿ, ಪುತ್ರರಾದ ಧನಂಜಯ, ವಿನೋದ್, ರಂಜಿತ್ ಹಾಗೂ ಪುತ್ರಿ ತೇಜಸ್ವಿನಿಯವರನ್ನು ಅಗಲಿದ್ದಾರೆ.