





ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಜೂನಿಯರ್ ರೆಡ್ ಕ್ರಾಸ್ ಘಟಕದ ಆಶ್ರಯದಲ್ಲಿ ಇದೇ ಬರುವ ಆಗಸ್ಟ್ 2 ರಂದು ಕಾಲೇಜಿನ ರಜತ ಮಹೋತ್ಸವ ಸ್ಮಾರಕ ಭವನದಲ್ಲಿ ‘ಫಿಲೋ ಆಟಿದ ಕೂಟ’ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಯಿ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ರೆ.ಫಾ.ಲಾರೆನ್ಸ್ ಮಸ್ಕರೇನಸ್ , ಮುಖ್ಯ ಅತಿಥಿಗಳಾಗಿ ‘ನವರಸರಾಜ’ ಭೋಜರಾಜ್ ವಾಮಂಜೂರು ಮತ್ತು ಗೌರವ ಉಪಸ್ಥಿತಿಯಲ್ಲಿ ಪುತ್ತೂರು ಮಾಯಿ ದೆ ದೇವುಸ್ ಚರ್ಚ್ ನ ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷರಾದ ಜೆರಾಲ್ಡ್ ಡಿಕೋಸ್ಟಾ, ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಹಿಸಲಿದ್ದಾರೆ.


ವಿಶೇಷ ಆಕರ್ಷಣೆಯಾಗಿ ‘ಕಲಾ ಸವ್ಯಸಾಚಿ’ ಪ್ರಶಾಂತ್ ಸಿ. ಕೆ ಹಾಗೂ ‘ಹಾಸ್ಯದರಸು’ ಸುಂದರ ಬಂಗಾಡಿ ಇವರಿಂದ ‘ಕುಸಾಲ್ಡ ರಸ’ ಕಾರ್ಯಕ್ರಮ ನಡೆಯಲಿದೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.














