ಪರಿವಾರ ಬಂಟರ ಸಂಘ ಪುತ್ತೂರು ವಲಯದ ವತಿಯಿಂದ ಆಟಿಕೂಟ

0

*ನಮ್ಮ ಆಚಾರ,ವಿಚಾರ,ಆರಾಧನೆ,ನಂಬಿಕೆಗಳಿಗೆ ತನ್ನದೆ ಆದ ಇತಿಹಾಸವಿದೆ ಇದನ್ನು ಉಳಿಸಿ ಬೆಳೆಸುವ ಜವಾಬ್ಧಾರಿ ನಮ್ಮೆಲ್ಲರದ್ದು- ರಾಧಾಕೃಷ್ಣ ನಾೖಕ್‌ ಕೊಟ್ಟಿಬೆಟ್ಟು ಏಳ್ನಾಡುಗುತ್ತು
*ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದು ಸತ್ ಸಂಪ್ರದಾಯದಲ್ಲಿ ಬೆಳೆವ ಯುವ ಜನಾಂಗ ನಮ್ಮದಾಗಬೇಕು – ರಘುವೀರ್ ನಾೖಕ್‌
*ಕರಾವಳಿ ಭಾಗದ ತುಳುನಾಡಿನ ಜನರ ಜೀವನ ಶೈಲಿ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ನಮ್ಮ ಆಚಾರ, ವಿಚಾರ,ಸಂಸ್ಕ್ರತಿ, ವಿಭಿನ್ನವಾಗಿದೆ -ಡಾ. ರಾಜೇಶ್ ಬೆಜ್ಜಂಗಳ

ಪುತ್ತೂರು: ಪರಿವಾರ ಬಂಟರ ಸಂಘ ಮಂಗಳೂರು ಇದರ ಪುತ್ತೂರು ವಲಯ, ಮಹಿಳಾ ವೇದಿಕೆ ಮತ್ತು ಯುವ ಪರಿವಾರ ಬಂಟರ ವೇದಿಕೆ ಪುತ್ತೂರು ವಲಯದ ಸಹಭಾಗಿತ್ವದಲ್ಲಿ ಆ.3 ರಂದು ಕೊಡಿಪ್ಪಾಡಿಯಲ್ಲಿರುವ ಪ್ರಫುಲ್ಲ- ಮನೋಹರ್ ನಾೖಕ್‌ ಕೊಳಕ್ಕಿಮಾರ್‌ರವರ ಮನೆಯ ಮುಂಭಾಗದಲ್ಲಿ ಭವ್ಯವಾಗಿ ಅಲಂಕರಿಸಲಾಗಿದ್ದ ಶ್ರೀ ಲಕ್ಷ್ಮೀ ವೇದಿಕೆಯಲ್ಲಿ ಪರಿವಾರ ಬಂಟರ ‘ಆಟಿಕೂಟ’ ನಡೆಯಿತು.

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾೖಕ್‌ ಕೊಟ್ಟಿಬೆಟ್ಟು ಏಳ್ನಾಡುಗುತ್ತು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತುಳುನಾಡಿನ ಶ್ರೀಮಂತ ಪರಂಪರೆಯಲ್ಲಿ ಬೆಳೆದ ಪರಿವಾರ ಬಂಟ ಸಮಾಜದವರ ಸಂಸ್ಕ್ರತಿ,ಪದ್ದತಿ,ಆಚಾರ,ವಿಚಾರ,ಆರಾಧನೆ,ನಂಬಿಕೆಗಳಿಗೆ ತನ್ನದೆ ಆದ ಇತಿಹಾಸವಿದೆ. ಇದನ್ನು ಉಳಿಸಿ ಬೆಳೆಸುವ ಜವಾಬ್ಧಾರಿ ನಮ್ಮೆಲ್ಲರದು ಎಂದರು. ಸಂಘದ ವತಿಯಿಂದ ಸಭಾಭವನ ನಿರ್ಮಾಣ ಮಾಡಲುದ್ದೇಶಿಸದ್ದು ಅದಕ್ಕೆ ಸಮಾಜ ಬಾಂಧವರ ಪೂರ್ಣ ಸಹಕಾರ ಬೇಕೆಂದರು.

ಮುಖ್ಯ ಅಭಾಯಗತರಾಗಿದ್ದ ಪರಿವಾರ ಬಂಟರ ಸಂಘ ಬೆಂಗಳೂರು ವಲಯದ ಅಧ್ಯಕ್ಷ ರಘುವೀರ್ ನಾೖಕ್‌ ಮಾತನಾಡಿ, ವಿಪರೀತ ಮಳೆಯ ಕಾರಣ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಟಿ ತಿಂಗಳಲ್ಲಿ ಮಾಡುವ ವಿವಿಧ ಖಾದ್ಯಗಳು,ಹಿಂದಿನ ಜನಾಂಗಕ್ಕೂ ಇಂದಿನ ಯುವ ಪೀಳಿಗೆಗೂ ಇರುವ ವ್ಯತ್ಯಾಸ, ಆಧುನಿಕತೆಯ ಹೆಸರಿನಲ್ಲಿ ನಡೆಯುವ ಸ್ವೇಚ್ಚಾಚಾರ ಜೀವನವನ್ನೆ ಬಲಿಕೊಡಬಹುದು ಇದನ್ನು ಅರಿತು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದು ಉತ್ತಮ ಸಂಪ್ರದಾಯದಲ್ಲಿ ಬೆಳೆವ ಯುವ ಜನಾಂಗ ನಮ್ಮದಾಗಬೇಕು ಎಂದರು.

ಆಟಿಯ ಮಹತ್ವ:
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತರಭೇತುದಾರರು ಮತ್ತು ಸಂಶೋಧನಾ ಪ್ರಾಧ್ಯಾಪಕ ಡಾ. ರಾಜೇಶ್ ಬೆಜ್ಜಂಗಳ ಮಾತನಾಡಿ, ಕರಾವಳಿ ಭಾಗದ ತುಳುನಾಡಿನ ಜನರ ಜೀವನ ಶೈಲಿ ಬೇರೆಲ್ಲು ಕಾಣಲು ಸಾಧ್ಯವಿಲ್ಲ ನಮ್ಮ ಆಚಾರ, ವಿಚಾರ,ಸಂಸ್ಕ್ರತಿ, ವಿಭಿನ್ನವಾಗಿದೆ. ಅಮವಾಸ್ಯೆಯಂದು ಕುಡಿಯುವ ಹಾಲೆಮರದ ಕಷಾಯ,ಹೊಸದಾಗಿ ಮದುವೆಯಾದ ಹೆಣ್ಣು ಮಗಳನ್ನು ಆಟಿ ತಿಂಗಳಲ್ಲಿ ತವರಿಗೆ ಕಳುಹಿಸುವ ಉದ್ದೇಶ, ಅಂದಿನ ಆಹಾರ ಪದ್ದತಿ,ಕೂಡು ಕುಟುಂಬದಲ್ಲಿದ್ದ ಸಂತೃಪ್ತಿ ,ವಿವಿಧ ಕಷಾಯಗಳ ಮೂಲಕವೇ ಆರೋಗ್ಯವನ್ನು ಕಾಪಾಡುತ್ತಿದ್ದ ರೀತಿ, ನಮ್ಮನ್ನಗಲಿದ ಹಿರಿಯರನ್ನು ನೆನೆಸಲು ಮಾಡುವ ಆಟಿ ಅಗೇಲು,ಹಿಂದಿನ ಕಾಲದಲ್ಲಿ ಆಟಿ ತಿಂಗಳೆಂದರೆ ಕಷ್ಟದ ತಿಂಗಳು ಬೇಸಾಯವೇ ಕಸುಬಾಗಿದ್ದ ಕಾಲ.ಆದಾಯಕ್ಕೆ ಬೇರೆ ಏನಿಲ್ಲ.ಕೃಷಿ ಕೆಲಸಗಳೆಲ್ಲ ಮುಗಿದು ವಿಪರೀತ ಮಳೆಗೆ ಹೊರಗೆ ಹೋಗಲಾಗದೆ ಮನೆಯಲ್ಲಿ ಶೇಖರಿಸಿಟ್ಟಿದ್ದ ಧವಸ ಧಾನ್ಯಗಳನ್ನು ಜೋಪಾನವಾಗಿಟ್ಟು ಇತಿಮಿತಿಯಲ್ಲಿ ಉಪಯೋಗಿಸಿ ಹಿತ್ತಿಲಲ್ಲೇ ಸಿಗುತ್ತಿದ್ದ ಸೊಪ್ಪು, ಗೆಡ್ಡೆ, ಗೆಣಸುಗಳನ್ನು ತಿಂದು ನಮ್ಮ ಹಿರಿಯರು ಜೀವನ ನಡೆಸುತ್ತಿದ್ದರು ಇದರಿಂದ ಅವರ ಆರೋಗ್ಯವು ಉತ್ತಮವಾಗಿತ್ತು ಎಂದರು.

ಕಾರ್ಯಕ್ರಮದ ಪ್ರಾಯೋಜಕರಾದ ಪರಿವಾರ ಬಂಟರ ಸಂಘ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮನೋಹರ್ ನಾೖಕ್‌ ಕೊಳಕ್ಕಿಮಾರ್ ಮಾತನಾಡಿ, ಇಂತಹ ಕಾರ್ಯಕ್ರಮ ಮಾಡಲು ನಮಗೆ ಅವಕಾಶ ಸಿಕ್ಕಿರುವುದು ನಮ್ಮ ಸೌಭಾಗ್ಯ ಇಂದಿನ ಸಮಾರಂಭ ಯಶಸ್ವಿಯಾಗಲು ಕಳೆದ ಹಲವಾರು ದಿನಗಳಿಂದ ಸದಸ್ಯರು ಶ್ರಮಿಸುತ್ತಿದ್ದಾರೆ ಅವರ ಶ್ರಮದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ಎಂದರು.

ಪರಿವಾರ ಬಂಟರ ಸಂಘ ಕೇಂದ್ರ ಸಮಿತಿ ಮತ್ತು ಪರಿವಾರ ಕ್ರ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಅಧ್ಯಕ್ಷರ ಸಂತೋಷ್ ಕುಮಾರ್ ಮಾತನಾಡಿ, ನಮ್ಮ ಬಾಲ್ಯದ ದಿನಗಳಲ್ಲಿ ಕಷ್ಟವಿದ್ದರೂ ಅಂದಿನ ಖುಷಿ ಸಂಭ್ರಮ ಇಂದಿನ ಮಕ್ಕಳಿಗಿಲ್ಲ ಅದನ್ನು ಅನುಭವಿಸಿದ ನಾವೇ ಪುಣ್ಯವಂತರು. ಇಂತಹ ಆಚರಣೆಯಿಂದ ಸಮಾಜ ಬಾಂಧವರೆಲ್ಲ ಒಟ್ಟಾಗಲು ಸಾಧ್ಯ, ಇಂತಹ ಇನ್ನಷ್ಟು ಉತ್ತಮ ಕಾರ್ಯಚಟುವಟಿಕೆಗಳನ್ನು ಮಾಡುತ್ತ ಮುನ್ನಡೆಯೊಣ ಎಂದರು.

ಪರಿವಾರ ಬಂಟರ ಸಂಘ ಪುತ್ತೂರು ವಲಯದ ಗೌರವಾಧ್ಯಕ್ಷ ಸುಧಾಕರ ಕೆ.ಪಿ ಮಾತನಾಡಿ, ಕೆಲವೇ ಜನರ ಸದಸ್ಯತನದೊಂದಿಗೆ ಪ್ರಾರಂಭವಾದ ಸಂಘ ಇಂದು ಸಾವಿರಾರು ಜನರ ಸದಸ್ಯತನದೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ.ಸಂಘದ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿ ಕೊಂಡಿದ್ದು ಸಮಾಜ ಬಾಂಧವರು ತನುಮನ ದನದ ಸಹಕಾರವನ್ನು ನೀಡಿ ಸಕ್ರೀಯವಾಗಿ ಭಾಗವಹಿಸಬೇಕು ಇಂತಹ ಒಗ್ಗಟ್ಟಿನಿಂದ ಎಂತಹ ಕಠಿಣ ಕೆಲಸವನ್ನಾದರೂ ಯಶಸ್ವಿಯಾಗಿ ನಿರ್ವಹಿಸಬಹುದೆಂದರು.


ಬಹುಮಾನ ವಿತರಣೆ:
ಜು.6ರಂದು ತೆಂಕಿಲ ಶಶಿದರ್ ನಾೖಕ್‌ ರವರ ಗದ್ದೆಯಲ್ಲಿ ನಡೆದ ಕೆಸರ್ಡ್ ಒಂಜಿ ದಿನದಂದು ನಡೆದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮತ್ತು ಲಕ್ಕಿಡಿಪ್ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಘದ ವತಿಯಿಂದ ನೂತನವಾಗಿ ನಿರ್ಮಾಣವಾಗುವ ನೂತನ ಕಟ್ಟಡಕ್ಕೆ ದೇಣಿಗೆ ಸಂಗ್ರಹ ಮಾಡಲಾಯಿತು.


ಪರಿವಾರ ಬಂಟರ ಸಂಘ ಪುತ್ತೂರು ವಲಯದ ಅಧ್ಯಕ್ಷರಾದ ಸರ್ವೇಶ್ ನಾೖಕ್‌ ಪಾದೆ ಮಾತನಾಡಿ, ಸಂಘ ನಮ್ಮೆಲ್ಲರದು ನಾವೆಲ್ಲರು ಒಟ್ಟು ಸೇರಿ ಯಶಸ್ವಿಯಾಗಿ ಮುನ್ನಡೆಸೋಣ,ಸದಸ್ಯರ ಸಹಕಾರದಿಂದ ಇಂದಿನ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂಬ ನಂಬಿಕೆ ನನ್ನದು ಇದಕ್ಕೆ ನಿಮ್ಮೆಲ್ಲರ ಪೂರ್ಣಸಹಕಾರ ದೊರೆತಿದೆ ಎಂದರು.

ಪರಿವಾರ ಬಂಟರ ಸಂಘ ಪುತ್ತೂರು ವಲಯದ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಪ್ರಭಾ ನಾೖಕ್‌,ಯುವ ಪರಿವಾರ ಬಂಟರ ವೇದಿಕೆಯ ಅಧ್ಯಕ್ಷ ನಿರೋಷ್ ನಾೖಕ್‌ , ಪರಿವಾರ ಬಂಟರ ಸಂಘದ ಪುತ್ತೂರು ವಲಯದ ಕಾರ್ಯದರ್ಶಿ ಕವನ್ ನಾೖಕ್‌,ಪ್ರಫುಲ್ಲ ಮನೋಹರ್ ನಾೖಕ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಪ್ರಭಾ ಕೇಶವ ನಾೖಕ್‌, ಹೇಮಲತಾ ಎಸ್.ನಾೖಕ್‌, ಮಮತಾ ನಾೖಕ್‌ ಪ್ರಾರ್ಥಿಸಿದರು. ಪ್ರೇಮಾನಂದ ನಾೖಕ್‌ ಸ್ವಾಗತಿಸಿದರು, ಮನೋಹರ್ ನಾೖಕ್‌ ವಂದಿಸಿದರು.ಸ್ಮಿತಾ ಎಸ್, ನಾೖಕ್‌ ಹಣಿಯೂರು ಕಾರ್ಯಕ್ರಮ ನಿರೂಪಿಸಿದರು. ಸುನಿಲ್,ಗಗನ್,ತುಳಸಿ.ಪೂಜಾ,ಸೌಮ್ಯ,ರೇಷ್ಮಾ ಸುಧಾಕರ್, ಶ್ರುತಿ ಸಹಕರಿಸಿದರು.ಸಹಭೊಜನದ ಬಳಿಕ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಅರೆಹಳ್ಳಿ ವಿಶ್ವನಾಥ ನಾೖಕ್‌, ಊಮೇಶ್ ನಾೖಕ್‌ ಪಿಜಕ್ಕಳ, ನಯನಚಂದ್ರ ಬೆಂಗಳೂರು,ನರೇಶ್ಚಂದ್ರ ಬೆಂಗಳೂರು,ರವೀಂದ್ರ ನಾೖಕ್‌ ಪಾಂಡಿ ಸೇರಿದಂತೆ ಹಲವಾರು ಗಣ್ಯರು,ಸಂಘದ ಪದಾಧಿಕಾರಿಗಳು,ಸದಸ್ಯರು ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದರು.

ಸನ್ಮಾನ /ಸ್ಕಾಲರ್‌ಶಿಪ್ ವಿತರಣೆ
ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ -ರವರನ್ನು ಸನ್ಮಾನಿಸಲಾಯಿತು. ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಿಸಲಾಯಿತು.
ಸಭೆಯಲ್ಲಿ ಸಮಾರಂಭದ ಮುಖ್ಯ ಪ್ರಾಯೋಜಕರಾದ ಮನೋಹರ್ ನಾೖಕ್‌ ಕೊಳಕ್ಕಿಮಾರ್ -ಪ್ರಫುಲ್ಲ ದಂಪತಿಯನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅವರ ಪುತ್ರ ಡಾ. ಅಧ್ವಿಕ್ ಪುತ್ರಿ ಅಶ್ವಿಜ ಉಪಸ್ಥಿತರಿದ್ದರು.

ಆಟಿ ಕೂಟದ ತಿಂಡಿ ತಿನಿಸುಗಳು
ಪತ್ರೊಡೆ ಗಸಿ,ಮಂಜಲ್ದಿರೆದ ಅಡ್ಯ,ಪದೆಂಜಿ ಗಂಜಿ,ಪತ್ರೊಡೆ ಉಪ್ಪುಕರಿ,ಮೆಂತೆದ ಮಣ್ಣಿ,ಪಸಂಗರಿ,ಕೊಲತ್ತರು ಪೆಲ್ತರಿ ಸುಕ್ಕ,ಮಶ್ರೂಮ್ ಪೆಪ್ಪರ್ ಚಿಲ್ಲಿ,ಪುನರ್ ಪುಳಿ ಸಾರು,ಬಾಳೆದಿಂಡು ಪಲ್ಯ,ಉಪ್ಪಡ್ಪಚಿಲ್ ಪಲ್ಯ,ರಾಗಿ ಮಣ್ಣಿ,ತಜಂಕ್ ಪಲ್ಯ,ಕಾಟು ಕುಕ್ಕು ಕೊದ್ಯೋಲ್,ಗುಲಾಬ್ ಜಾಮೂನ್,ಪೆಲಕ್ಕೈದ ಪಾಯಸ,ತಜಂಕ್ ಪೆಲತರಿ ಪಲ್ಯ,ಮರುವಾಯಿ ಸುಕ್ಕ,ಕನಿಲೆ ಪದೆಂಜಿ ಪೆಲತೆರಿ ಸುಕ್ಕ,ಕಣಿಲೆ ಪದೆಂಜಿ ಗಸಿ,ಚಿಕನ್ ಕಬಾಬ್, ಒಣ ಎಟ್ಟಿ ಪಲ್ಯ,ಮರುವಾಯಿ ಪುಂಡಿ,ಕಲಿ,ತಜಂಕ್ ಚಟ್ಟಂಬಡೆ,ಮಸಾಲ ಮಜ್ಜಿಗೆ ,ರಂಭ ಪಾಕ್,ಮೈತಾಲ್ ಶರಬತ್ತು,ಕರಿಯ ಚೇವು ದಂಟುದ ಗಸಿ ,ನೀರ್ ಕುಕ್ಕು ಚಟ್ನಿ,ಸೆಮಿಗೆ,ಕಡ್ಲೆ ಬೇಳೆ ಸಾಗು ಪಾಯಸ,ಮೆತ್ತೆ ಅಡ್ಪುನಾ,ನೀರು ದೋಸೆ,ಹಲಸಿನ ಗಟ್ಟಿ,ಸೌತೆ ಕಾಯಿ ಹುಳಿ ಪದಾರ್ಥ,ಹಲಸಿನ ಗಾರಿಗೆ,ಮದ್ದು ಕೋಲು ಮಣ್ಣಿ, ಡ್ರೈ ಎಟ್ಟಿ ಚಟ್ನಿ,ಕರಿಯ ಚೇವು ಸಾಸಿಮೆ,ಅನನಾಸು ಕ್ಷೀರ,ಕರ್ಜಿಕಾಯಿ,ಉಂಡ್ಲಿಗ,ಬಚ್ಚಿರೆ ಗಾಂಧಾರಿ ಮುಂಚಿ ಜ್ಯೂಸ್, ಬಸಳೆ ಪುಂಡಿ, ಪುದಿನ ಚಟ್ನಿ,ಪಾನಕ,ತಿಮರೆ ಚಟ್ನಿ,ಕುಡು ಚಟ್ನಿ, ಪೂಂಬೆ ಪಲ್ಯ, ಅಕ್ಕಿ ಮೆಂತೆ ಲಾಡು, ಚೇವು ಅಂಬಡೆ ಪುಲಿ ಮುಂಚಿ, ಬಂದನಾರು ಕಷಾಯ, ಕೆರಂಗ್ ಪೊದಿ,ಹೋಳಿಗೆ, ಇಡ್ಲಿ,ಕೆತ್ತಿಗಸಿ, ಮರುವಾಯಿ ಸುಕ್ಕ,ಕೋರಿ ಸಾರ್,ಸುಕ್ಕ, ವೆಜ್ ರಸಂ, ಆಮ್ಲೆಟ್, ಕಲಿ, ಐಸ್ ಕ್ರೀಂ ಹಾಗೂ ಇನ್ನಿತರ ಖಾದ್ಯಗಳಿದ್ದವು.

LEAVE A REPLY

Please enter your comment!
Please enter your name here