ಪುತ್ತೂರು: ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ 05 ವರ್ಷಗಳಿಂದ ತಲೆಮರೆಸಿಕೊಂಡದ್ದ ಹಾಸನ ಮೂಲದ, ಮಂಗಳೂರಿನ ತಲಪಾಡಿ ಎಂಬಲ್ಲಿ ವಾಸವಿದ್ದ ಅಕ್ಬರ್ ಸೊಹೈಬ್ (24) ಎಂಬಾತನನ್ನು ಉಪ್ಪಿನಂಗಡಿ ಠಾಣಾ ಪೊಲೀಸ್ ಉಪನಿರೀಕ್ಷರಾದ ಕೌಶಿಕ್ ರವರ ನೇತೃತ್ವದಲ್ಲಿ, ಉಪ್ಪಿನಂಗಡಿ ಠಾಣೆಯ ಸಿಬ್ಬಂಧಿಗಳಾದ ಶಿವರಾಮ ರೈ, ಸಿಪಿಸಿ ಶ್ರೀಶೈಲ ಎಂ.ಕೆ, ಸಿಪಿಸಿ ಮೊಹಮ್ಮದ್ ಮೌಲನಾ ಅವರ ತಂಡವು ಆ.4ರಂದು ರಂದು ಹಾಸನದ ಬಿಟ್ಟಗೌಡನಹಳ್ಳಿ ಎಂಬಲ್ಲಿ ಬಂಧಿಸಿದ್ದಾರೆ.
- ಬಂಧಿತನ ವಿರುದ್ಧ ಈಗಾಗಲೇ , ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ, ಬಂಟ್ವಾಳ ನಗರ ಠಾಣೆಯಲ್ಲಿ,ಉಳ್ಳಾಲ ಪೊಲೀಸ್ ಠಾಣೆಯಲ್ಲಿ,ಕೇರಳದ ಕನಪ್ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ವಾರೆಂಟ್ ಜಾರಿಯಾಗಿರುತ್ತದೆ.