ಪುತ್ತೂರು: ಈಶ್ವರಮಂಗಲ ಶ್ರೀ ಗಜಾನನ ಶಾಲೆಯಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆಯ ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಪಾಪೆಮಜಲು ಸರಕಾರಿ ಪ್ರೌಢಶಾಲಾ 17ರ ವಯೋಮಿತಿಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರಲ್ಲಿ ರಂಜಿತ್ ಪ್ರಥಮ ಸ್ಥಾನ ಶ್ರವಣ್ ಕುಮಾರ್ ದ್ವಿತೀಯ, ಚರಿಷ್ಮಾ ತೃತೀಯ, ತನ್ವಿ ಐದನೇ ಸ್ಥಾನ ಮತ್ತು 14 ರ ವಿಭಾಗದಲ್ಲಿ ಅಭಿಷೇಕ್ ತೃತೀಯ ಸ್ಥಾನ, ಕೆ ವಿ ಲಾಸ್ಯ ದ್ವಿತೀಯ ಸ್ಥಾನ, ಯಕ್ಷಿತಾ ಚತುರ್ಥ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.