ಪುತ್ತೂರು: ಬನ್ನೂರು ಆರ್ ಟಿ ಓ ಆಫೀಸ್ ಪಕ್ಕದಲ್ಲಿರುವ ನವೋದಯ ಯುವಕ ಮಂಡಲದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು .
ಮುಖ್ಯ ಅತಿಥಿಯಾಗಿ ಶ್ರುತಿ ಸ್ಟೇಷನರಿಯ ಮಾಲಕರಾದ ಮೋಹನ್ ಜೈನ್ ಧ್ವಜ ರೋಹಣವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕ ಚಂದ್ರಾಕ್ಷ ಬಿಎನ್ ,ಗೌರವಾಧ್ಯಕ್ಷರಾದ ಅಂಗಾರ ಪಿ, ರಾಧಾಕೃಷ್ಣ ರೈ ಅಧ್ಯಕ್ಷರು ನವೋದಯ ಯುವಕ ವೃಂದ, ಉಮೇಶ್ ಬಿ ಆನೆ ಮಜಲು ಉಪಾಧ್ಯಕ್ಷರು ನವೋದಯ ಯುವಕ ವೃಂದ,ಮಹಿಳಾ ಮಂಡಲದ ಅಧ್ಯಕ್ಷರಾದ ನಳಿನಿ, ಅಂಗನವಾಡಿ ಶಿಕ್ಷಕಿಯಾದ ವನಿತ, ರೋಹಿತ್ ರೈ ಕಾರ್ಯದರ್ಶಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆಯನ್ನು ಹಾಡಿದರು ಪ್ರಾಸ್ತಾವಿಕವಾಗಿ ಚಂದ್ರಾಕ್ಷ ಬಿಎನ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅಧ್ಯಕ್ಷರು ಸ್ವಾಗತಿಸಿ, ರಾಧಾಕೃಷ್ಣ ಗೌಡ ಇವರು ವಂದಿಸಿದರು.