ಪುತ್ತೂರು: ಕುಂಬ್ರ ಹನಿಬೀ ಅಲ್-ಬಿರ್ರ್ ಪ್ರೀ-ಸ್ಕೂಲ್ ನಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಸ್ವಚ್ಛವಾದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಹೊಸ ನೀರಿನ ಶುದ್ಧಿಕರಣ ಯಂತ್ರವನ್ನು ಆ.23ರಂದು ಉದ್ಘಾಟಿಸಲಾಯಿತು.
ಖ್ಯಾತ ಪ್ರೇರಣಾದಾಯಕ ಭಾಷಣಗಾರ ರಫೀಕ್ ಮಾಸ್ಟರ್ ಉದ್ಘಾಟಿಸಿದರು. ಈ ಶುದ್ಧಿಕರಣ ಯಂತ್ರವನ್ನು ದಾನಿಯಾಗಿ ಡಿಗ್ನಿಟಿ ಗ್ರೂಪ್ ಗೋಲ್ಡ್ ಅಂಡ್ ಡೈಮಂಡ್, ಪುತ್ತೂರು ಸಂಸ್ಥೆಯ ಬಾತೀಷಾ ಕನಕಮಜಲ್ ಅವರು ಕೊಡುಗೆಯಾಗಿ ನೀಡಿದ್ದರು.
ಕಾರ್ಯಕ್ರಮದಲ್ಲಿ ಮಧುರಾ ಗ್ರೂಪ್ ನ ಅಧ್ಯಕ್ಷ ಹನೀಫ್ ಮಧುರಾ, ಕಾರ್ಯದರ್ಶಿ ಮಿಸ್ರಿಯಾ ಹನೀಫ್ ಮಧುರಾ, ಡಿಗ್ನಿಟಿ ಗ್ರೂಪ್ ನ ಬಾತಿಷಾ ಕನಕಮಜಲ್, ಆಡಳಿತಾಧಿಕಾರಿ ಅಬ್ದುಲ್ ರಹಿಮಾನ್, ಎಂ ಎಚ್ ಆರ್ಕೇಡ್ ಮ್ಯಾನೇಜರ್ ಸಮದ್, ಶಿಕ್ಷಕಿಯರು ಮತ್ತು ಹಲವಾರು ಮಂದಿ ಪೋಷಕರು ಉಪಸ್ಥಿತರಿದ್ದರು.