ಸ್ವಾತಂತ್ರ್ಯೋತ್ಸವ ಕವಿಗೋಷ್ಠಿ – 2025 ಕಾರ್ಯಕ್ರಮ

0

ವಿದ್ಯಾರ್ಥಿಗಳು ಅವಕಾಶಗಳ ಸದ್ಬಳಕೆ ಮಾಡಿಕೊಂಡಾಗ ಯಶಸ್ಸು ಸಾಧ್ಯ- ಬಾಲಕೃಷ್ಣ ಕಾರಂತ್ ಎರುಂಬು


ಪುತ್ತೂರು:
ಕರ್ನಾಟಕ ರಾಜ್ಯ ಮಕ್ಕಳ ಸಾ. ಪರಿಷತ್ತು ಬಂಟ್ವಾಳ ತಾ. ಘಟಕ ನೇತೃತ್ವದಲ್ಲಿ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ತಾಲೂಕು ಇದರ ಸಂಯೋಜನೆಯಲ್ಲಿ ಆ.23ರಂದು ಅಳಿಕೆ ಎರುಂಬು ಶ್ರೀ ವಿಷ್ಣುಮಂಗಲ ದೇವಸ್ಥಾನದ ವಠಾರದಲ್ಲಿ”ಸ್ವಾತಂತ್ರ್ಯೋತ್ಸವ ಕವಿಗೋಷ್ಠಿ :2025″ ನಡೆಯಿತು.

ಕ. ರಾ. ಮ. ಸಾ. ಪರಿಷತ್ತು ಬಂಟ್ವಾಳ ತಾ. ಘಟಕ ಇದರ ಗೌರವಾಧ್ಯಕ್ಷ ಬಾಲಕೃಷ್ಣ ಕಾರಂತ್ ಎರುಂಬು ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ” ವಿದ್ಯಾರ್ಥಿಗಳು ಅವಕಾಶಗಳ ಸದ್ಬಳಕೆ ಮಾಡಿಕೊಂಡಾಗ ಯಶಸ್ಸು ಸಾಧ್ಯ. ಸಾಹಿತ್ಯವು ಯಾವ ವಿದ್ಯಾರ್ಥಿಗಳ ಅಧ್ಯಯನಕ್ಕೂ ಅಡಚಣೆಯನ್ನು ಉಂಟು ಮಾಡುವುದಿಲ್ಲವೆಂದರು.

ಕನ್ನಡ ಸಾ. ಪರಿಷತ್ತು ಪುತ್ತೂರು ತಾ. ಘಟಕ ಇದರ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ದೀಪಪ್ರಜ್ವಲನೆ ಮೂಲಕ ಸಮಾರಂಭವನ್ನು ಉದ್ಘಾಟಿಸಿ, “ಸ್ವರಚಿತ ಕವನಗಳೊಂದಿಗೆ ಸಂಭ್ರಮಿಸುತ್ತಿರುವ ಮಕ್ಕಳು ಭವಿಷ್ಯದ ಬಗ್ಗೆ ಹೊಸಭರವಸೆಯನ್ನು ಮೂಡಿಸುತ್ತಾರೆ ಇವರಿಗೆ ವೇದಿಕೆಯನ್ನೊದಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.


ಮಕ್ಕಳ ಕಲಾ ಲೋಕ ಬಂಟ್ವಾಳ ಇದರ ಅಧ್ಯಕ್ಷ ರಮೇಶ್ ಬಾಯಾರು,ಹಿರಿಯ ಸಾಹಿತಿ ಮತ್ತು ಮಧು ಪ್ರಪಂಚ ಪತ್ರಿಕೆಯ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ, ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಸಂದರ್ಭೋಚಿತವಾಗಿ ಮಾತನಾಡಿ, ಶುಭ ಹಾರೈಸಿದರು.

ಸಭಾ ಕಾರ್ಯಕ್ರಮದಲ್ಲಿ 2023ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ಸ್ವಾತಂತ್ರ್ಯೋತ್ಸವ ಕವಿಗೋಷ್ಠಿ-2025ರ ಅಧ್ಯಕ್ಷತೆಯಲ್ಲಿ ಗೋಪಾಲಕೃಷ್ಣ ನೇರಳಕಟ್ಟೆ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಶ್ರೀ ವಿಷ್ಣುಮಂಗಲ ಸೇವಾ ಸಮಿತಿ, ಎರುಂಬು ಇದರ ಅಧ್ಯಕ್ಷ ವಸಂತ ಕುಲಾಲ್ ಹಾಗು ಸುಜ್ಞಾನ ಮಹಿಳಾ ಮಂಡಲ ಎರುಂಬು ಇದರ ಅಧ್ಯಕ್ಷರಾದ ಶಾಲಿನಿ ಸದಾನಂದ ಶೆಟ್ಟಿ, ಚಂದ್ರ ಮೌಳಿ ಕಡಂದೇಲು ಉಪಸ್ಥಿತರಿದ್ದರು. ನಾರಾಯಣ ಕುಂಬ್ರ ಸ್ವಾಗತಿಸಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಇದರ ಅಧ್ಯಕ್ಷರಾದ ಶ್ರೀಕಲಾ ಕಾರಂತ್ ಅಳಿಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.


ಧನ್ವಿತಾ ಕಾರಂತ್ ಅಳಿಕೆ ಮತ್ತು ಧನುಶ್ರೀ ಎಸ್ ಎರುಂಬು ಪ್ರಾರ್ಥಿಸಿ,ರಶ್ಮಿತಾ ಸುರೇಶ್ ಜೋಗಿಬೆಟ್ಟು ವಂದಿಸಿ, ಜಗದೀಶ್ ಬಾರಿಕೆ ಕಾರ್ಯಕ್ರಮ ನಿರೂಪಿಸಿದರು.ಎಂ ಎಸ್ ಪೂಜಾ ಅಳಿಕೆ ಸಹಕರಿಸಿದರು.

ಜನಮನ ಗೆದ್ದ ಮಕ್ಕಳ ಕವಿಗೋಷ್ಠಿ
ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ ಇದರ ಮುಖ್ಯ ಗುರು, ರಾಷ್ಟ್ರೀಯ ತರಬೇತುದಾರ, ಸಂಪನ್ಮೂಲ ವ್ಯಕ್ತಿ ಗೋಪಾಲಕೃಷ್ಣ ನೇರಳಕಟ್ಟೆ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಗೆ, ದ.ಕ. ಆಮಂತ್ರಣ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಜಿಲ್ಲಾಧ್ಯಕ್ಷರಾದ ವಿಂಧ್ಯಾ ಎಸ್ ರೈ ಚಾಲನೆ ನೀಡಿದರು.ಕವಿಗೋಷ್ಠಿಯಲ್ಲಿ ಸ. ಉ. ಹಿ. ಪ್ರಾ.ಶಾಲೆ ಪಡಿಬಾಗಿಲು ಇಲ್ಲಿನ ವಿನಮ್ರ, ಸಾನ್ಯ,ಬಿಂದುಶ್ರೀ, ನೇಹಲ್, ಹಿತಾಶ್ರೀ, ಅನನ್ಯ, ಹನ್ಸಿಕ, ಧನ್ವಿಕಾ, ಧನ್ವಿತ್, ಭುವಿಕಾ, ರಕ್ಷಣ್, ಕೆ. ಪಿ.ಚೈತನ್ಯ, ದ.ಕ. ಜಿ.ಪಂ. ಉ. ಹಿ. ಪ್ರಾ. ಶಾಲೆ ದೇಲಂತಬೆಟ್ಟು ಇಲ್ಲಿನ ವಿದ್ಯಾರ್ಥಿಗಳಾದ ಅವಿಲ್ ಡಿಸೋಜ, ಖದೀಜತ್ ಮಿನ್ನ,ತನವ್,ಅನ್ವಿ, ಲಕ್ಷಿತಾ, ಯಶ್ವಿತ್,ಫಾತಿಮತ್ ನಾದಿಯಾ, ಫಾತಿಮತ್ ನಾಮಿಯಾ, ಫಾತಿಮತ್ ಶಝ್ನ, ಅಹಲಂ, ಹಿತ, ಖದೀಜತ್ ಅಸ್ನ. ಪ್ರೌಢಶಾಲೆ ಕೇಪು ಕಲ್ಲಂಗಳ ಇಲ್ಲಿನ ರಚನೇಶ್ವರಿ, ಗುಣಶ್ರೀ,ಧನ್ವಿತಾ ಜಿ. ಪಿ,ಪ್ರಜ್ಞಾ, ರಕ್ಷಿತಾ,ಶ್ರೀ ಸತ್ಯ ಸಾಯಿ ಲೋಕ ಸೇವಾ ವಿದ್ಯಾಸಂಸ್ಥೆಯ ಮೌಲ್ಯ ಡಿ.ಎಂ,ಸೋಹಮ್ ಶ್ರೀಧರ,ಧನುಶ್ರೀ ಎಸ್ ಅಳಿಕೆ, ಧನ್ವಿತಾ ಕಾರಂತ್ ಅಳಿಕೆ, ಶಿರ್ಷಿತಾ ಕಾರಂತ್ ಅಳಿಕೆ, ಹಿರಿಯ ಮತ್ತು ಯುವ ಕವಿಗಳಾದ ಶ್ರೀ ಸಂಜೀವ ಮಿತ್ತಳಿಕೆ, ಮಲ್ಲಿಕಾ ಜೆ ರೈ, ಗಿರೀಶ್ ಪೆರಿಯಡ್ಕ, ಆತ್ಮಿಕಾ ಏಮಾಜೆ, ಮಮತಾ ಡಿ ಕೆ ಅನಿಲಕಟ್ಟೆ, ಶೈಲಜಾ ಕೇಕಣಾಜೆ, ತಶ್ವಿ ಶಾಂಭವಿ ಜೋಗಿಬೆಟ್ಟು,ಲೇಖನ ಏಮಾಜೆ, ಎಂ ಎಸ್ ಪೂಜಾ ಅಳಿಕೆ, ರಶ್ಮಿತಾ ಸುರೇಶ್ ಜೋಗಿಬೆಟ್ಟು, ಅಪೂರ್ವ ಕಾರಂತ್ ದರ್ಬೆ ಭಾಗವಹಿಸಿದ್ದರು. ಅಪೂರ್ವ ಕಾರಂತ್ ಮತ್ತು ಶಿರ್ಷಿತಾ ಕಾರಂತ್ ಕವಿಗೋಷ್ಠಿ ನಿರೂಪಣೆಗೈದರು.

LEAVE A REPLY

Please enter your comment!
Please enter your name here