





ಆಲಂಕಾರು: ಪೆರಾಬೆ ಗ್ರಾಮದ ಬೆಳ್ಪಾಡಿ ದಿ.ಬಂಟಪ್ಪ ರೈ ಯವರ ಪುತ್ರ ಪರಾರಿ ಬೆಳ್ಪಾಡಿಗುತ್ತಿನ ಯಜಮಾನ ಜನಾರ್ಧನಾ ರೈ (86.ವ) ವಯೋ ಸಹಜವಾಗಿ ಅ.7ರಂದು ಸ್ವಗೃಹದಲ್ಲಿ ನಿಧನರಾದರು.


ಮೃತರು ಪ್ರಗತಿಪರ ಕೃಷಿಕರಾಗಿ ಪೂಂಜ ದೈವಸ್ಥಾನದ ಪದಾಧಿಕಾರಿಯಾಗಿ, ಪರಾರಿ, ಬೆಳ್ಪಾಡಿಗುತ್ತಿನ ಯಾಜಮಾನನಾಗಿ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನ ತಾನು ತೊಡಗಿಸಿಕೊಂಡಿದ್ದರು. ಮೃತರು ಮಕ್ಕಳಾದ ಗಣೇಶ್ ರೈ, ಶಕೀಲ, ಪ್ರಮೀಳಾ, ಸೊಸೆ ಅನುಪಮ, ಅಳಿಯಂದಿರಾದ ಜಯರಾಮ ರೈ, ರವೀಂದ್ರ ರೈ ಮತ್ತು ಮೊಮ್ಮಕ್ಕಳನ್ನು ಮತ್ತು ಕುಟುಂಬಸ್ಥರನ್ನು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.















