





ಕಡಬ: ಕುಸಾಲ್ದ ಜವನೆರೆ ಕೂಟ ಹೊಸ್ಮಠ ಬಲ್ಯ ಇದರ ವತಿಯಿಂದ ಬಲ್ಯ ಗ್ರಾಮದ ಶ್ರೀರಾಮ ಮೈದಾನ ಕಕ್ಕೇಮಜಲು ಇಲ್ಲಿ ಅ. 26ರಂದು ನಡೆದ 52ಕೆಜಿ ವಿಭಾಗದ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಉಳಿಕೆಯಾದ ರೂ. 27,441 ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ನೆಲ್ಯಾಡಿ ಗ್ರಾಮದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತ ಜನಾರ್ಧನ ಗಡಿಕಲ್ಲು ಇವರ ಚಿಕಿತ್ಸಾ ವೆಚ್ಚಕ್ಕೆ ನೀಡಲಾಯಿತು. ಈ ಸಂದರ್ಭದಲ್ಲಿ ಕಬಡ್ಡಿ ಪಟುಗಳು ಮತ್ತು ಕಬಡ್ಡಿ ಪ್ರೇಮಿಗಳು ಉಪಸ್ಥಿತರಿದ್ದರು.












