“ರುಧಿರ್ವನ “ ಕನ್ನಡ ಸಿನೆಮಾಗೆ ಅಂತರಾಷ್ಟ್ರೀಯ ಮನ್ನಣೆ

0

ಪುತ್ತೂರು : ನೆಲ್ಯಾಡಿಯ ಅನುಪಮ್ ಜಾರ್ಜ್ ಕಲ್ಲುಪುರ ಪರಂಬಿಲ್ ಮತ್ತು ಬೆಂಗಳೂರಿನ ಅಗ್ನಿ ಅವರು ನಿರ್ಮಿಸಿರುವ “ರುಧಿರ್ವನ “ಎಂಬ ಕನ್ನಡ ಸಿನೆಮಾವು ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆಯಿತು.

ಈ ಚಿತ್ರವನ್ನು ಬೆಂಗಳೂರಿನ ಅಗ್ನಿ ನಿರ್ದೇಶಿಸಿದ್ದಾರೆ. ತಾರಗಣದಲ್ಲಿ ಪಾವನ ಗೌಡ ಭೀಮ ಚಿತ್ರದ ಪೋಲಿಸ್ ಪಾತ್ರದಲ್ಲಿ ನಟಿಸಿದ್ದ ಪ್ರಿಯಾ ಶಠಮರ್ಶನ, ಮೇಧಿನಿ ಕೆಲ ಮನೆ, ಅವೀನಾಶ್ ರೈ, ಅರ್ಜನ್ ಕಜಿ, ಅಪೂರ್ವ ಅವರು ನಟಿಸಿದ್ದಾರೆ. ತಂತ್ರಾಜ್ಞನ ವಿಭಾಗದಲ್ಲಿ ಕನ್ನಡ ಚಿತ್ರರಂಗದ ಮೇಧಾವಿಗಳು ಇದ್ದಾರೆ. ಚಿತ್ರೀಕರಣ ಮತ್ತು ನಿರ್ಮಾಣದಲ್ಲಿ ಅನೀಶ್ ಮಟ್ಟಂ ನೆಲ್ಯಾಡಿ ಅವರು ಸಹಕರಿಸಿದರು.ಈ ಚಿತ್ರವು 2026 ರಲ್ಲಿ ತೆರೆ ಕಾಣಲಿದೆ.

LEAVE A REPLY

Please enter your comment!
Please enter your name here