ಪುತ್ತೂರು: ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಸ್ಕೂಟರ್ ಡಿಕ್ಕಿಯಾಗಿ ಗಾಯಗೊಂಡ ಘಟನೆ ಬೆಳ್ಳಾರೆ ರಸ್ತೆಯ ಕುಂಬ್ರದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಕೆಯ್ಯೂರು ಗ್ರಾಮದ ಸಣಂಗಲ ನಿವಾಸಿ ಬಡುವಕುಂಞಿ ಅವರು ಗಾಯಗೊಂಡವರು. ಅವರು ಜ.12ರಂದು ಬೆಳ್ಳಾರೆ ರಸ್ತೆಯಲ್ಲಿ ಮನೆ ಕಡೆ ಹೋಗಲೆಂದು ನಿಂತಿದ್ದ ವೇಳೆ ಶರಣ್ಯ ಎಂಬವರು ಚಲಾಯಿಸುತ್ತಿದ್ದ ಸ್ಕೂಟರ್ ಅವರಿಗೆ ಡಿಕ್ಕಿಯಾಗಿದೆ.
ಅಪಘಾತದಿಂದಾಗಿ ಬಡುವಕುಂಞಿ ಅವರು ಗಾಯಗೊಂಡಿದ್ದು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.