ಸವಣೂರು: ಶ್ರವಣರಂಗ ಪ್ರತಿಷ್ಠಾನ ಸವಣೂರು ಇದರ ವತಿಯಿಂದ ಸವಣೂರಿನ ಪರಣೆಯ ಪಂಚಮಿ ನಿವಾಸದಲ್ಲಿ 23 ನೇ ವರ್ಷದ ಗಣಹೋಮ ಮತ್ತು ಸತ್ಯ ನಾರಾಯಣ ದೇವರ ಪೂಜೆಯ ಪ್ರಯುಕ್ತ ಪಾರ್ಥ ಸಾರಥ್ಯ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು ಹಿಮ್ಮೇಳದಲ್ಲಿ ಭಾಗವತರಾಗಿ ಆನಂದ ಸವಣೂರು,ಗಣೇಶ ಪೆರುವಾಜೆ,ನೇಸರ ಟಿ.ಎಸ್,ಮಾನ್ವಿ ಜಿ ಎಸ್, ಶ್ರೇಯಾ ಸವಣೂರು, ಚೆಂಡೆ ಮದ್ದಳೆಯಲ್ಲಿ ತಾರಾನಾಥ ಸವಣೂರು, ಅಚ್ಯುತ ಭಕ್ತಕೋಡಿ, ಮುಮ್ಮೇಳದಲ್ಲಿ ಶ್ರೀ ಕೃಷ್ಣನಾಗಿ ನಾ.ಕಾರಂತ ಪೆರಾಜೆ, ಕೌರವನಾಗಿ ಗುಡ್ಡಪ್ಪ ಬಲ್ಯ,ಅರ್ಜುನನಾಗಿ ತಾರಾನಾಥ ಸವಣೂರು, ಬಲರಾಮನಾಗಿ ಅಚ್ಯುತ ಭಕ್ತಕೋಡಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಮನೆಯ ಯಜಮಾನರಾದ ಮತ್ತು ಸೀತಾರಾಮ ಗೌಡ ಸವಣೂರು ಮತ್ತು ಮನೆಯವರು ಕಲಾವಿದರನ್ನು ಗೌರವಿಸಿದರು.