ಪುತ್ತೂರು: ಡ್ಯೂಕ್ ಬೈಕ್ ವೊಂದು ಮುಂದೆ ಚಲಿಸುತ್ತಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾದ ಘಟನೆ ಜ.27 ರಂದು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ತೆಂಕಿಲ ಗೌಡ ಸಮುದಾಯ ಭವನದ ಬಳಿ ನಡೆದಿದೆ.
ಮಂಗಳೂರು ಕಡೆಯಿಂದ ಬರುತ್ತಿದ್ದ ಡ್ಯೂಕ್ ಬೈಕ್ ತೆಂಕಿಲ ಬೈಪಾಸ್ ಗೌಡ ಸಮುದಾಯ ಭವನದ ಬಳಿ ತಲುಪುತ್ತಿದ್ದಂತೆ ಸವಾರ ನರೇಶ್ ಅವರ ಹತೋಟಿ ತಪ್ಪಿ ಬೈಕ್ ಮುಂದೆ ಚಲಿಸುತ್ತಿದ್ದ ಡ್ಯೂಯೊ ಸ್ಕೂಟರ್ ಮತ್ತು ಫ್ಯಾಶನ್ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿಯ ಡ್ಯೂಕ್ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ.