- ಅಧ್ಯಕ್ಷೆ: ಬಿಂದು ಕೆ.ಎಸ್., ಕಾರ್ಯದರ್ಶಿ: ಕವಿತ
ನೆಲ್ಯಾಡಿ: ಧರಿತ್ರಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಶಿರಾಡಿ ಇದರ ನೂತನ ಅಧ್ಯಕ್ಷರಾಗಿ ಶಿರಾಡಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಬಿಂದು ಕೆ.ಎಸ್.,ಹಾಗೂ ಕಾರ್ಯದರ್ಶಿಯಾಗಿ ಕವಿತ ಆಯ್ಕೆಗೊಂಡಿದ್ದಾರೆ.
ಮಾ.೨೨ರಂದು ಶಿರಾಡಿ ಗ್ರಾ.ಪಂ.ನಲ್ಲಿ ನಡೆದ ಒಕ್ಕೂಟದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಕೋಶಾಧಿಕಾರಿಯಾಗಿ ಬಿಂದುರೆಜಿ, ಸದಸ್ಯರುಗಳಾಗಿ ಪ್ರಿಯಲತಾ, ದಿವ್ಯ, ಸಿಂಧು, ಸುಮಿತ್ರ, ವಿಜಯಲಕ್ಷ್ಮೀ, ಸಂಧ್ಯಾ, ವಿನಿತಾ ಆಯ್ಕೆಗೊಂಡರು.