![](https://puttur.suddinews.com/wp-content/uploads/2022/04/5b7363166bae4f7a95ccc85e6a1f03a6.jpg)
ನಿಡ್ಪಳ್ಳಿ; ಲೋಕ ಕಲ್ಯಾಣಾರ್ಥವಾಗಿ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸೀಯಾಳಾಭಿಷೇಕ ಮತ್ತು ರುದ್ರಪಾರಾಯಣ ಕಾರ್ಯಕ್ರಮ ಎ.15 ರಂದು ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕ ದಿವಾಕರ ಭಟ್ ನೇತೃತ್ವದಲ್ಲಿ ಸೀಯಾಳಾಭಿಷೇಕ ಕಾರ್ಯಕ್ರಮ ನಡೆಯಿತು. ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಳ್ಳಾಲ್ ಶಿವಗಿರಿ ಬೀಡು ಮತ್ತು ಆಡಳಿತ ಮಂಡಳಿ ಸದಸ್ಯರು ಊರ ಭಕ್ತಾದಿಗಳು ಪಾಲ್ಗೊಂಡರು.