ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಹಾಗೂ ನವಚೇತನ ಹಿರಿಯ ನಾಗರಿಕರ ವಸತಿ ಸಮುಚ್ಚಯ ಶಾಂತಿಗೋಡು ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಪ್ರಪ್ರಥಮ ಬಾರಿಗೆ 55ವರ್ಷ ಮೇಲ್ಪಟ್ಟ ಸಾಹಿತಿಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ವಯೋಶ್ರೇಷ್ಠ ಕವಿ ಗೋಷ್ಠಿ ಮೇ೧ ರಂದು ಶಾಂತಿಗೋಡು ನವಚೇತನ ಹಿರಿಯ ನಾಗರಿಕರ ವಸತಿ ಸಮುಚ್ಚಯದಲ್ಲಿ ಆಯೋಜಿಸಲಾಗಿದೆ. ಕವಿಗೋಷ್ಠಿಯು ಸಾರ್ವಜನಿಕರ ಹಾಗೂ ಶಿಕ್ಷಕರ ವಿಭಾಗಗಳಲ್ಲಿ ನಡೆಯಲಿದೆ.
ಕವಿಗೋಷ್ಠಿ ವಿಷಯ : ನಿವೃತ್ತ ಜೀವನ ವಿಷಯ ಮತ್ತು ಮುಕ್ತ(ನಿಮ್ಮಿಷ್ಟದ ಯಾವುದೇ ವಿಷಯದ ಕವನ ವಾಚನ ಮಾಡಬಹುದು) ಆಸಕ್ತರು ಎ.೨೮ರ ಮುಂಚಿತವಾಗಿ 9844401295 ಈ ಸಂಖ್ಯೆಯಲ್ಲಿ ನೋಂದಾಯಿಸತಕ್ಕದ್ದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ತಿಳಿಸಿದ್ದಾರೆ.