ಪುತ್ತೂರು; ಮಾಣಿ- ಮೈಸೂರು ರಾ.ಹೆದ್ದಾರಿಯ ಕುಂಬ್ರ ಸೇತುವೆಯ ಬಳಿ ಇದ್ದ ಅಪಾಯಕಾರಿ ಪೊದೆಗಳನ್ನು ಕುಂಬ್ರದ ಮಾತೃಶ್ರೀ ಅರ್ಥ್ ಮೂವರ್ಸ್ ಮಾಲಕರಾದ ಮೋಹನ್ದಾಸ್ ರೈ ಕುಂಬ್ರ ತೆರವು ಮಾಡಿಸಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಇಲ್ಲಿರುವ ಪೊದೆಗಳಿಂದಾಗಿ ಸೇತುವೆಯ ಬಳಿ ಅಪಾಯಕಾರಿ ಸನ್ನಿವೇಶ ಎದುರಾಗಿತ್ತು. ಸೇತುವೆಯ ಮೇಲೆ ಬರುವ ವಾಹನಗಳು ಥಟ್ಟನೆ ಗೋಚರಿಸದೆ ಕೆಲವೊಂದು ಅಪಘಾತಗಳು ನಡೆದಿತ್ತು. ಮಳೆ ಬರುವ ವೇಳೆ ಸೇತುವೆಯ ಒಂದು ಭಾಗ ಪೊದೆಗಳಿಂದ ಸಂಪೂರ್ಣ ಮುಚ್ಚಿ ಹೋಗುತ್ತಿತ್ತು ಇದನ್ನು ಮನಗಂಡ ಮೋಹನ್ದಾಸ್ ರವರು ಜೆಸಿಬಿ ಯಂತ್ರದ ಮೂಲಕ ಪೊದೆಗಳನ್ನು ತೆರವು ಮಾಡಿ ಮಾನವೀಯತೆ ಮೆರೆದಿದ್ದಾರೆ.