ಕಡಬ: ಕೊಂಬಾರು ಗ್ರಾಮದ ಮಣಿಭಾಂಡ ಕೊಂಬಾರುಕಟ್ಟೆ ಕುಮಾರಪುರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮಂದಿರದಲ್ಲಿ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿಯ ನೂತನ ಬಿಂಬ ಪ್ರತಿಷ್ಠಾನೆ ವೇದಮೂರ್ತಿ ಶ್ರೀ ನಾರಾಯಣ ಅಸ್ರಣ್ಣಾಯರವರ ನೇತೃತ್ವದಲ್ಲಿ ಮೇ.15ರಂದು ನಡೆಯಲಿದೆ.
ಮೇ.14ರಂದು ರಾತ್ರಿ ಸ್ವಸ್ತಿ ಪುಣ್ಯಾಹ, ಸಪ್ತ ಶುದ್ಧಿ, ಪ್ರಾಸಾದ ಶುದ್ಧಿ, ರಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ಬಿಂಬ ಶುದ್ಧಿ, ಅಧಿವಾಸ, ದುಗಾ ಪೂಜೆ, ನವಗ್ರಹ ಆರಾಧನೆ ನಡೆಯಲಿದೆ. ಮೇ.15ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಪ್ರತಿಷ್ಠೆ, ಬ್ರಹ್ಮಕಲಶ, ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ ನಡೆಯಲಿದೆ ಎಂದು ಕೆ.ಎನ್. ಪ್ರಸನ್ನಕುಮಾರ ಕುಮಾರಪುರ ತಿಳಿಸಿದ್ದಾರೆ.