ಪುತ್ತೂರು: ಮೇ 20 ರಿಂದ 22ರಂದು ಚೆನ್ನೈನಲ್ಲಿ ನಡೆಯುತ್ತಿರುವ ಪುರುಷರ ಮತ್ತು ಮಹಿಳೆಯರ 22ನೇ ರಾಷ್ಟ್ರೀಯ ಬೀಚ್ ವಾಲಿಬಾಲ್ ಚಾಂಪಿಯನ್ಶಿಪ್ ಇದರ ಟೆಕ್ನಿಕಲ್ ಕಮಿಟಿಯ ಸದಸ್ಯರಾಗಿ ಪುತ್ತೂರಿನ ಸಂಪ್ಯ ನಿವಾಸಿಯಾಗಿರುವ ಎನ್ಐಎಸ್(ಎಸ್ಎಐ) ವಾಲಿಬಾಲ್ ಕೋಚ್ ಪಿವಿ ನಾರಾಯಣನ್ ಆಯ್ಕೆಯಾಗಿದ್ದಾರೆ.
ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಈ ಆಯ್ಕೆಯನ್ನು ಮಾಡಿ ರಾಷ್ಟ್ರೀಯ ಬೀಚ್ ವಾಲಿಬಾಲ್ ಟೆಕ್ನಿಕಲ್ ಸಮಿತಿ ಸದಸ್ಯರಗಿ ಆಯ್ಕೆಯಾಗಿದ್ದು, ಇವರು ಭಾರತೀಯ ಬೀಚ್ ವಾಲಿಬಾಲ್ ಸ್ಥಾಪಕ ಸದಸ್ಯರು ಮತ್ತು ಸಿಂಡಿಕೇಟ್ ವಾಲಿಬಾಲ್ ತಂಡದ ಕೋಚ್ ಆಗಿ ಹಲವಾರು ವರ್ಷ ಕಾರ್ಯನಿರ್ವಹಿಸುತ್ತಿದ್ದರು . ಇವರು ಪುತ್ತೂರು ಮಿತ್ರವೃಂದ ವಾಲಿಬಾಲ್ ಅಕಾಡೆಮಿಯ ಮ್ಯಾನೇಜಿಂಗ್ ಟ್ರಸ್ಟಿ ಕೂಡ ಆಗಿರುತ್ತಾರೆ ಮತ್ತು ಐಟಿಎಂ ವಾಲಿಬಾಲ್ ಸ್ಪೋರ್ಟ್ಸ್ ಕ್ಲಬ್ ಪುತ್ತೂರು ಇದರ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಿತ್ರವೃಂದ ವಾಲಿಬಾಲ್ ಅಕಾಡೆಮಿ ವತಿಯಿಂದ ಪ್ರತಿವರ್ಷ ಬೇಸಿಗೆ ಶಿಬಿರ ಮಾಡಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಹಲವಾರು ಮಕ್ಕಳಿಗೆ ನೀಡುತ್ತಿದ್ದಾರೆ.