ಪುತ್ತೂರು: 2021-22ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡದ್ದ ಈರ್ವರು ವಿದ್ಯಾರ್ಥಿಗಳು ಮರು ಮೌಲ್ಯ ಮಾಪನದಲ್ಲಿ ಉತ್ತೀರ್ಣಗೊಂಡಿದ್ದು ಕೋಡಿಂಬಾಡಿಯ ಶಾಂತಿನಗರ ಸರಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ ಲಭಿಸಿದೆ. ಪ್ರೌಢಶಾಲೆಯಿಂದ ಒಟ್ಟು 29 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 27 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 93.10 ಫಲಿತಾಂಶ ಲಭಿಸಿತ್ತು. ಅನುತ್ತೀರ್ಣಗೊಂಡಿದ್ದ ಇಬ್ಬರು ಮರು ಮೌಲ್ಯ ಮಾಪನ ಮಾಡಿಸಿದ್ದರು. ಅವರು ತೇರ್ಗಡೆಗೊಂಡು ಇದೀಗ ಶೇ. 100 ಫಲಿತಾಂಶ ಲಭಿಸಿದೆ