ಪುತ್ತೂರು: ವಿಶ್ವ ಪ್ರವಾದಿ ಮಹಮ್ಮದ್ (ಸ.ಅ) ನಿಂದನೆ ಮಾಡಿದ ಬಿಜೆಪಿ ಮುಖಂಡರ ಬಂಧನಕ್ಕೆ ಆಗ್ರಹಿಸಿ ಸಂಟ್ಯಾರ್ ಜಮಾಅತ್ ವತಿಯಿಂದ ಜೂ.10ರಂದು ಮದ್ಯಾಹ್ನ ಜುಮಾ ನಮಾಜಿನ ಸಂಟ್ಯಾರ್ ಬದ್ರಿಯಾ ಜುಮಾ ಮಸೀದಿಯ ಮುಂಭಾಗದಲ್ಲಿ ಭಿತ್ತಿ ಪತ್ರ ಹಿಡಿದು ಸಾಂಕೇತಿಕ ಪ್ರತಿಭಟನೆ ನಡೆಯಿತು. ಪ್ರವಾದಿಯವರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿರುವ ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ರನ್ನು ಕೂಡಲೇ ಬಂಧಿಸಬೇಕು. ಇಸ್ಲಾಮಿನ ಬಗ್ಗೆ ಪ್ರವಾದಿಯವರ ಬಗ್ಗೆ ಅಥವಾ ಇತರ ಯಾವುದೇ ಧರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡುವವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತಾಗಬೇಕು ಎಂದು ಸಂಟ್ಯಾರ್ ಜಮಾಅತ್ ಕಮಿಟಿಯ ಗೌರವಾಧ್ಯಕ್ಷ ಹಮೀದಾಲೀಸ್ ತಿಳಿಸಿದರು.