ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಜಲರಿಸಿ ಯೋಜನೆಯ ಮೂಲಕ ನಡೆಯುವ ಪೈಪ್ ಅಳವಡಿಕೆ ಕಾಮಗಾರಿಯಿಂದ ನಿರ್ಮಾಣಗೊಂಡ ಹೊಂಡದ ಸಮಸ್ಯೆಯಿಂದ ವಾಹನ ಸಂಚಾರಕ್ಕೆ ತೊಡಕಾಗಿರುವುದನ್ನು ಗಮನಿಸಿ ದರ್ಬೆ ಪಾರ್ಕ್ನ ಬಿಎಮ್ಎಸ್ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘದ ಸದಸ್ಯರು ದರ್ಬೆಯಲ್ಲಿ ರಸ್ತೆ ಹೊಂಡಗಳ ದುರಸ್ಥಿಯನ್ನು ಶ್ರಮದಾನದ ಮೂಲಕ ನಡೆಸಿದರು.
ದರ್ಬೆ ಪುಷ್ಪಾಂಜಲಿ ಸಭಾಭವನದ ಬಳಿ ಆಟೋ ರಿಕ್ಷಾ ಚಾಲಕರು ಬೆಳಗ್ಗೆ ಶ್ರಮದಾನದ ಮೂಲಕ ಹೊಂಡಗಳನ್ನು ಮುಚ್ಚಿದ್ದಾರೆ. ಆಟೋ ರಿಕ್ಷಾ ಚಾಲಕರ ಶ್ರಮದಾನಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.