ಬಡಗನ್ನೂರುಃ ವಾಗ್ದೇವಿ ಸಂಗೀತ ಶಾಲೆ, ಪುತ್ತೂರು ಇದರ ಶಾಖೆಯು ಕೌಡಿಚ್ಚಾರ್ ನ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಜೂ.30 ರಂದು ಉದ್ಘಾಟನೆಗೊಂಡಿತು.
ಭಜನಾ ಮಂದಿರ ಅಧ್ಯಕ್ಷ ರಾಮದಾಸ್ ಮದ್ಲ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.. ಮುಖ್ಯ ಅತಿಥಿಗಳಾಗಿ ಅರಿಯಡ್ಕ ಗ್ರಾ ಪಂ. ಸದಸ್ಯ ಹರೀಶ್ ರೈ ಭಜನಾ ಮಂದಿರದ ಕೋಶಾಧಿಕಾರಿ ತಿಲಕ್ ರೈ ಕುತ್ಯಾಡಿ, ಉಪಸ್ಥಿತರಿದ್ದರು, ವಾಗ್ದೇವಿ ಸಂಗೀತ ಶಾಲೆ ಯ ಶಿಕ್ಷಕಿ ಸವಿತಾ ಸ್ವಾಗತಿಸಿ, ಪಟ್ಟೆ ಪ್ರತಿಭಾ ಪ್ರೌಢಶಾಲೆ ಶಿಕ್ಷಕ ವಿಶ್ವನಾಥ್ ಗೌಡ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.ನಾರಾಯಣ ಗೌಡ ಪಟ್ಲಕಾನಾ ಸಹಕಾರಿಸಿದರು.