ಪುತ್ತೂರು: ಪಾಲೆಚ್ಚಾರು ಗೋವಿಂದ ನಾಯಕ್ ಅವರ ಸ್ವಗೃಹದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಶಿವ ಪೂಜಾ ಕಾರ್ಯಕ್ರಮದ ಸಂದರ್ಭದಲ್ಲಿ ದರ್ಬೆಯ ಶ್ರೀ ಸರಸ್ವತಿ ಮಹಿಳಾ ಮಂಡಳಿಯ ಸದಸ್ಯೆಯರಿಂದ ಗೀತಾವಾಚನ,ವಿಷ್ಣುಸಹಸ್ರನಾಮ ಪಾರಾಯಣ ನಡೆಯಿತು .ಅಪರಾಹ್ನ ‘ಸಂಜಯ ರಾಯಭಾರ ‘ ಯಕ್ಷಗಾನ ತಾಳಮದ್ದಳೆ ನಡೆಯಿತು .ಬಳಿಕ ಪಾಲೆಚ್ಚಾರು ಮನೆಯ ಹಿರಿಯರಾದ ಕೃಷ್ಣ ನಾಯಕ್ ದಂಪತಿಗಳನ್ನು ಗೌರವಿಸಲಾಯಿತು .ಭಾಲಾವಲೀಕಾರ್ ಗೌಡ ಸಾರಸ್ವತ ಸಮಾಜ ಸೇವಾ ಸಂಘ ಪುತ್ತೂರು ಇದರ ಅಧ್ಯಕ್ಷ ಬಿ.ಆರ್ ಶುಭಾಕರ ರಾವ್ ಪ್ರಸ್ಥಾವಿಕ ಮಾತುಗಳನ್ನಾಡಿದರು .ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪುಂಡಿಕಾಯಿ ಸ್ವಾಗತಿಸಿ ,ಸಂಘದ ನಿರ್ದೇಶಕ ಬಾಲಕೃಷ್ಣ ನಾಯಕ್ ತೆಂಕಿಲ ವಂದಿಸಿದರು .ಮಹಿಳಾ ಮಂಡಳಿ ಹಾಗೂ ಸಂಘದ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.