ಬೆಳ್ಳಾರೆ: ಪ್ರವೀಣ್ ಹತ್ಯೆಯಾದ ಬಳಿಕ ರೈ ಎಸ್ಟೇಟ್ & ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಪ್ರವೀಣ್ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಸಹಾಯ ಧನ ಘೋಷಿಸಿದ್ದರು. ಜು.30ರಂದು ಪ್ರವೀಣ್ ಮನೆಗೆ ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರೊಂದಿಗೆ ಆಗಮಿಸಿದ ಅಶೋಕ್ ಕುಮಾರ್ ರೈ ತಾವು ಘೋಷಣೆ ಮಾಡಿದ ಸಹಾಯಧನದ ಚೆಕ್ ನ್ನು ಪ್ರವೀಣ್ ಮನೆಯವರಿಗೆ ಹಸ್ತಾಂತರಿಸಿದರು.