ಕೆಯ್ಯೂರು: ವಿಶ್ವ.ಹಿಂದೂ ಪರಿಷತ್ ಭಜರಂಗದಳ ಮಾತೃಶಕ್ತಿ ದುರ್ಗವಾಹಿನಿ ಕೆಯ್ಯೂರು, ವಿಶ್ವ ಹಿಂದೂ ಪರಿಷತ್ ಭಜರಂಗದಳ ವೀರಾಂಜನೇಯ ಘಟಕ ತಿಂಗಳಾಡಿ, ವಿಶ್ವ ಹಿಂದೂ ಪರಿಷತ್ ಯುವ ಕೇಸರಿ ಘಟಕ ಅಂಕತ್ತಡ್ಕ, ಇದರ ಜಂಟಿ ಸಹಯೋಗದಲ್ಲಿ ಅಖಿಲ ಭಾರತ ಸಂಕಲ್ಪ ದಿನ ಮತ್ತು ಪಂಜಿನ ಮೆರವಣಿಗೆ ಅ10ರಂದು ರಾತ್ರಿ ಭಾರತ ಮಾತಾ ಪೋಟೋಗೆ ಪುಷ್ಪಾರ್ಚನೆ ಮಾಡುವ ಮೂಲಕ ಕೆಯ್ಯೂರು ದೇವಳದ ದ್ವಾರದಿಂದ ದೇವಳದ ವಠಾರ ತನಕ ನಡೆಯಿತು.
ಈ ಸಂದರ್ಭದಲ್ಲಿ ದಿಕ್ಸೂಚಿ ಭಾಷಣವನ್ನು ವಿ.ಹಿ.ಪ. ಜಿಲ್ಲಾ ದರ್ಮ ಪ್ರಚಾರ ಪ್ರಮುಖ್ ಕೃಷ್ಣ ಉಪಾದ್ಯಯ ನೀಡಿದರು. ಅದ್ಯಕ್ಷತೆಯನ್ನು ಶ್ರೀ ಕ್ಷೇತ್ರ ಕೆಯ್ಯೂರು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿ.ಹಿ.ಪ.ಭ.ಶ್ರೀ ದುರ್ಗಾ ಶಾಖೆ ಕೆಯ್ಯೂರು ಅದ್ಯಕ್ಷ ಚರಣ್ ಸಣಂಗಳ, ಬಜರಂಗದಳ ಸಂಯೋಜಕ ಶ್ರೀ ದುರ್ಗಾ ಶಾಖೆ ಕೆಯ್ಯೂರು ಸಂದೀಪ್ ಸಣಂಗಳ, ದುರ್ಗಾಪರಮೇಶ್ವರ್ ದಂಪತಿಗಳು,ಮ್ಯಾನೇಜಿಂಗ್ ಡೈರೆಕ್ಟರ್ ಶುಭಂ ಕರೋತಿ ಗುರುಕುಲ ಬೆಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದವರು.
ವಿ.ಹಿ.ಪ. ಪುತ್ತೂರು ಗ್ರಾಮಾಂತರ ಪ್ರಖಂಡ ಜಾಗರಣ ವೇದಿಕೆ ಕಾರ್ಯದರ್ಶಿ ರವಿಕುಮಾರ್ ಕೈತಡ್ಕ ಸ್ವಾಗತಿಸಿ, ವಿ.ಹಿ.ಪ ಪುತ್ತೂರು ಗ್ರಾಮಾಂತರ ಪ್ರಖಂಡ ಬಜರಂಗದಳ ಸಂಯೋಜಕ ವಿಶಾಖ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು. ಬಿಜೆಪಿ ಕಾರ್ಯಕರ್ತರು, ಮಾತೃಶಕ್ತಿ, ದುರ್ಗಾವಾಹಿನಿ ಕಾರ್ಯಕರ್ತೆಯರು, ಸಾರ್ವಜನಿಕ ಬಂದುಗಳು,ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.