ಒಕ್ಕಲಿಗ ಸ್ವಸಹಾಯ ಟ್ರಸ್ಟಿನಿಂದ ನಿವೃತ್ತ ಯೋಧ ಪುಷ್ಪರಾಜ್ ರವರಿಗೆ ಗೌರವಾರ್ಪಣೆ

0

ಪುತ್ತೂರು : ಕೇಂದ್ರೀಯ ಗಡಿಭದ್ರತಾ ಪಡೆಯಲ್ಲಿ 21 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಕೋಡಿಂಬಾಡಿ ಗ್ರಾಮದ ಬಾರ್ತಿಕುಮೇರು ಪುಷ್ಪರಾಜ್ ಗೌಡರವರನ್ನು ಅವರ ಸ್ವಗೃಹದಲ್ಲಿ ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಟ್ರಸ್ಟ್‌ನ ಅಧ್ಯಕ್ಷ ಡಿ.ವಿ.ಮನೋಹರ್, ಸ್ಥಾಪಕಾಧ್ಯಕ್ಷ ಎ.ವಿ.ನಾರಾಯಣ, ಟ್ರಸ್ಟ್‌ನ ಸಲಹಾ ಸಮಿತಿ ಸದಸ್ಯರಾದ ಜಿನ್ನಪ್ಪ ಗೌಡ, ವೆಂಕಪ್ಪ ಗೌಡ, ಟ್ರಸ್ಟ್‌ನ ಮೆನೇಜರ್ ಗಿರಿಧರ ಅಂಬೆಕಲ್ಲು, ಕೋಡಿಂಬಾಡಿ ಒಕ್ಕಲಿಗ ಒಕ್ಕೂಟದ ಅಧ್ಯಕ್ಷ ಬಾಬು ಗೌಡ, ಕಾರ್ಯದರ್ಶಿ ಎಲ್ಯಣ್ಣ ಗೌಡ, ಟ್ರಸ್ಟ್ ಮೇಲ್ವಿಚಾರಕಿ ಸುಮಲತ, ಟ್ರಸ್ಟ್‌ನ ಸಿಬ್ಬಂದಿಗಳಾದ ತಾರಾನಾಥ, ಜಿನಿತ್, ಪುಷ್ಪರಾಜ್‌ರವರ ಪತ್ನಿ ವಿದ್ಯಾ ಬಾರ್ತಿಕುಮೇರು, ದೈಹಿಕ ಶಿಕ್ಷಣ ನಿದೇಶಕ ಬಾಲಚಂದ್ರ ಗೌಡ ಬಾರ್ತಿಕುಮೇರು, ಮೋಹಿನಿ ಬಾರ್ತಿಕುಮೇರು ಹಾಗೂ ಸುದ್ದಿ ಪತ್ರಿಕೆಯ ವರದಿಗಾರ ರಮೇಶ್ ಕೆಮ್ಮಾಯಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here