ಆ.27:  ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಸಾರ್ವಜನಿಕ ಶ್ರೀ ಶನೈಶ್ಚರ ವ್ರತ ಕಲ್ಪೋಕ್ತ ಪೂಜೆ

0

ಪುತ್ತೂರು: ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುವ 41ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ವ್ರತ ಕಲ್ಪೋಕ್ತ ಪೂಜೆಯು ಆ.27ರಂದು ಸಂಜೆ ನಡೆಯಲಿದೆ.

ಸಂಜೆ ಗಂಟೆ 4ಕ್ಕೆ ಕಲಶ ಪ್ರತಿಷ್ಠೆ, ಬಳಿಕ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಶನೈಶ್ಚರ ಪೂಜೆ ಸೇವೆ ಮಾಡಿಸುವ ಭಕ್ತರು ಸೇವಾ ರಶೀದಿಯನ್ನು ಪಡೆಯಬೇಕು. ಅದೇ ರೀತಿ ಪೂಜೆಗೆ ಎಳ್ಳು,ಎಳ್ಳೆಣ್ಣೆಯನ್ನು ಸ್ವೀಕರಿಸಲಾಗುವುದು ಎಂದು ಶ್ರೀ ಗುರುರಾಘವೇಂದ್ರ ಸ್ವಾಮಿ ಸೇವಾ ಸಮಿತಿಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here