ತೆಂಕಿಲ ಗರೋಡಿಯಲ್ಲಿ ಮಳೆಗೆ ಕುಸಿದ ಮನೆ 

0

ನಗರಸಭೆಯಿಂದ ಮನೆ ಮಂದಿಗೆ ಪರ್ಯಾಯ ವ್ಯವಸ್ಥೆ

ಪುತ್ತೂರು:ನಗರಸಭೆ ವ್ಯಾಪ್ತಿಯ ತೆಂಕಿಲ ಗರೋಡಿಯಲ್ಲಿ ನಿರಂತರ ಸುರಿದ ಮಳೆಗೆ ಮನೆಯೊಂದು ಕುಸಿದು ಬಿದ್ದ ಘಟನೆ ಆ.24ರಂದು ಸಂಜೆ ನಡೆದಿದೆ.ಮನೆ ಕುಸಿದ ಪರಿಣಾಮ ಮನೆ ಮಂದಿಗೆ ನಗರಸಭೆ ತಾತ್ಕಾಲಿಕವಾಗಿ ವಾಸ್ತವ್ಯಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದೆ.

ತೆಂಕಿಲ ಗರೋಡಿ ಕೊರಗಜ್ಜ ಗುಡಿಯ ಬಳಿ ಮಹಾಲಿಂಗ ಎಂಬವರ ಮನೆ ಕುಸಿದು ಹೋಗಿದೆ. ಮನೆ ಬೀಳುವ ಸಂದರ್ಭ ಮನೆಯಲ್ಲಿ ಮಹಾಲಿಂಗ ಅವರ ಪತ್ನಿ ಇದ್ದು, ಶಬ್ದ ಕೇಳಿ ಅವರು ಹೊರ ಬಂದಿದ್ದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ.ಒಟ್ಟು ಮೂರು ಮಂದಿ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು.ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಸ್ಥಳೀಯ ಸದಸ್ಯೆ ದೀಕ್ಷಾ ಪೈ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರನ್ನು ಸ್ಥಳೀಯ ಮನೆಯೊಂದರಲ್ಲಿ ತಾತ್ಕಾಲಿಕವಾಗಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಿದರು.ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಚಂದ್ರಶೇಖರ್ ರಾವ್ ಬಪ್ಪಳಿಗೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here