ಸುಬ್ರಹ್ಮಣ್ಯ: ಗುಡ್ಡ ಜರಿತದಿಂದ ಮನೆ, ಇಬ್ಬರು ಪುತ್ರಿಯರನ್ನು ಕಳೆದುಕೊಂಡ ಕುಟುಂಬಕ್ಕೆ ಟೈಲರ್ ಅಸೋಸಿಯೇಷನ್‌ನಿಂದ 2,32,888.00 ರೂ.ನ ಚೆಕ್ ಹಸ್ತಾಂತರ

0

ಪುತ್ತೂರು : ಸುಬ್ರಹ್ಮಣ್ಯ ಪರ್ವತಮುಖಿಯಲ್ಲಿ ಗುಡ್ಡ ಜರಿತದಿಂದ ಮನೆ ಹಾಗೂ 2 ಹೆಣ್ಣು ಮಕ್ಕಳನ್ನು ಕಳೆದುಕೊಂಡ ರೂಪಶ್ರೀ ಟೈಲರ್‌ರವರ ಕುಟುಂಬಕ್ಕೆ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ದ. ಕ. ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷ ಜಯಂತ ಉರ್ಲಾಂಡಿಯವರ ನೇತೃತ್ವದಲ್ಲಿ ಸಹಾಯಧನದ ಚೆಕ್ ವಿತರಣೆ ಹಾಗೂ ಸಂತಾಪ ಸಭೆ ಆ.೨೫ರಂದು ಸುಬ್ರಹ್ಮಣ್ಯದಲ್ಲಿ ನಡೆಯಿತು. ಸಭೆಯಲ್ಲಿ ರೂ.2,32,888.00 ಮೊತ್ತದ ಚೆಕ್‌ನ್ನು ಹಸ್ತಾಂತರಿಸಲಾಯಿತು.

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ನಿಕಟಪೂರ್ವ ರಾಜ್ಯಾಧ್ಯಕ್ಷ ಕೆ.ಎಸ್. ಆನಂದ್, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ವಸಂತ ಬಿ., ರಾಜ್ಯ ಉಪಾಧ್ಯಕ್ಷ ಸುರೇಶ್ ಸಾಲಿಯನ್, ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಲಿಗೋದರ್, ಜಿಲ್ಲಾ ಕೋಶಾಧಿಕಾರಿ ಈಶ್ವರ್ ಕುಲಾಲ್, ಮೂಡಬಿದ್ರೆ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ದಾಮೋದರ್ ಶೆಟ್ಟಿಗಾರ್, ಸದಸ್ಯ ಚಂದ್ರಹಾಸ್ ಬಂಟ್ವಾಳ, ಕ್ಷೇತ್ರದ ಅಧ್ಯಕ್ಷ ನಾಗೇಶ್ ಎಂ. ಬಂಟ್ವಾಳ, ಪ್ರಧಾನ ಕಾರ್ಯದರ್ಶಿ ಯದೇಶ್ ತುಂಬೆ, ಸುಳ್ಯ ಕ್ಷೇತ್ರ ಅಧ್ಯಕ್ಷ ದಿವಾಕರ, ಕಾರ್ಯದರ್ಶಿ ಆಶಾ ರೈ, ಉಪಾಧ್ಯಕ್ಷ ರವೀಂದ್ರ, ಮಂಗಳೂರು ಉರ್ವ ವಲಯಾಧ್ಯಕ್ಷ ಉದಯ್ ಕೊಡಿಕಲ್, ಜಯಪ್ರಕಾಶ್ ಸುನಿಲ್, ಸುಳ್ಯ ಕ್ಷೇತ್ರದ ಕುಸುಮಾಧರ್, ಗುತ್ತಿಗಾರ್ ವಲಯದ ವೆಂಕಟ್ರಮಣ ಮಾಧವ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here