ಆಕೃತಿ ಕನ್ಸ್ ಸ್ಟ್ರಕ್ಷನ್ ನ ಮಾಲಕರ ಪುತ್ರ ಲಶ್ವಿ‌ಕ್ ರವರ ಹುಟ್ಟು ಹಬ್ಬದ ಪ್ರಯುಕ್ತ ಧನಸಹಾಯ ವಿತರಣೆ

0

ವಿಟ್ಲ: ಕಂಬಳಬೆಟ್ಟು ಆಕೃತಿ ಕನ್ಸ್‌ ಸ್ಟ್ರಕ್ಷನ್ ನ ಮಾಲಕ ವಿಟ್ಲ ಕಸಬ ಗ್ರಾಮದ ಮಾಡ್ತೇಲು ನಿವಾಸಿ ಇಂಜಿನಿಯರ್ ದಿನೇಶ್ ಕುಮಾರ್ ಅವರ  ಪುತ್ರ ಲಶ್ವಿ‌ಕ್ ರವರ ಪ್ರಥಮ ವರ್ಷದ ಹುಟ್ಟು ಹಬ್ಬವು ಆ.27ರಂದು ನಡೆಯಿತು.

ಈ ಸಂದರ್ಭದಲ್ಲಿ ಹುಟ್ಟು ಹಬ್ಬದ ಪ್ರಯುಕ್ತ ಇರಂದೂರು ಪಡೀಲು ನಿವಾಸಿ ಹೇಮಾವತಿ ಪುತ್ರಿ ಅಕ್ಷತಾರವರಿಗೆ ವಿದ್ಯಾಭ್ಯಾಸಕ್ಕಾಗಿ ಹಾಗೂ ಕಂಬಳಬೆಟ್ಟು ನಿವಾಸಿ ಸುಕುಮಾರರವರಿಗೆ ಚಿಕಿತ್ಸೆಗಾಗಿ ಧನಸಹಾಯ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ದಿನೇಶ್ ಕುಮಾರ್ , ಪತ್ನಿ ಚೈತ್ರ, ತಾಯಿ ಕಲ್ಯಾಣಿ, ಸಂಬಂಧಿಕರಾದ ಆದರ್ಶ್ ಪಟೇಲ್ ಸುಳ್ಯ, ಪುಷ್ಪಲತಾ, ದಯಾನಂದ ಕುರುಂಜಿ, ಕುಸುಮ, ಶಿವಾನಿ, ಶಿವಾಲಿ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here