ಮಡಿಕೇರಿಯಲ್ಲಿ ಕೋಳಿ ಆಹಾರ ಸಾಗಾಟದ ಲಾರಿ ಪಲ್ಟಿ – ಚಾಲಕ ವಿಟ್ಲ ಮೂಲದ ವ್ಯಕ್ತಿ ಮೃತ್ಯು

0

ವಿಟ್ಲ: ಸೋಮವಾರಪೇಟೆ ತಾಲೂಕಿನ ಶುಂಠಿಕೊಪ್ಪ ಬಳಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ವಿಟ್ಲ ಮೂಲದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ. ವಿಟ್ಲ ಸಮೀಪದ ಅಳಿಕೆ ಗ್ರಾಮ ಜೆಡ್ಡು ಕೃಷ್ಣ ನಾಯ್ಕರ ಪುತ್ರ ನಾಗಭೂಷಣ(35 ವ.) ಮೃತ ದುರ್ದೈವಿ. ಘಟನೆಯಿಂದಾಗಿ ಲಾರಿಯಡಿ ಸಿಲುಕಿದ್ದ ಚಾಲಕನ ಮೃತದೇಹ ಹೊರ ತೆಗೆಯಲು ಸ್ಥಳೀಯರು ಹರಸಾಹಸ ಪಡಬೇಕಾಗಿ ಬಂದಿದ್ದು, ಈ ಬಗ್ಗೆ ಶುಂಠಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

LEAVE A REPLY

Please enter your comment!
Please enter your name here