ತಿರ್ಲೆ ದೇವಸ್ಥಾನಕ್ಕೆ ಮುಂಬೈ ಉದ್ಯಮಿ ಶ್ರೀಧರ ರೈಯವರಿಂದ 1 ಲಕ್ಷ ರೂ.ದೇಣಿಗೆ

0

ನೆಲ್ಯಾಡಿ: ಜೀರ್ಣೋದ್ದಾರಗೊಳ್ಳುತ್ತಿರುವ ಕೊಣಾಲು ಗ್ರಾಮದ ತಿರ್ಲೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಕೊಣಾಲು ಕಡೆಂಬಿಲತ್ತಾಯಗುಡ್ಡೆ ಚಕ್ರವರ್ತಿ ಕೊಡಮಣಿತ್ತಾಯಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್‌ರೈ ಕೊಣಾಲುಗುತ್ತುರವರ ಸಹೋದರ, ಮುಂಬೈಯಲ್ಲಿ ಉದ್ಯಮಿಯಾಗಿರುವ ಶ್ರೀಧರ ರೈ ಕೊಣಾಲುಗುತ್ತುರವರು 1 ಲಕ್ಷ ರೂ.ದೇಣಿಗೆ ಹಸ್ತಾಂತರಿಸಿದರು.

ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಾಧವ ಸರಳರಾಯರವರು ದೇಣಿಗೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ವಿಶ್ರಾಂತ ಪ್ರಾಂಶುಪಾಲ ವಿಠಲ ರೈ ಕೊಣಾಲುಗುತ್ತು, ಹೇಮಾ ವಿಠಲ ರೈ, ಕೀರ್ತನ್ ರೈ ಕೊಣಾಲುಗುತ್ತು, ಪ್ರವೀಣ್ ಭಂಡಾರಿ ಪುರ, ಸುಂದರ ಶೆಟ್ಟಿ ಪುರ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here