ಕೊಳ್ತಿಗೆ ನವೋದಯ ಸಂಘದ ಮಾಸಿಕ ಸಭೆ

0

ಪುತ್ತೂರು : ಕೊಳ್ತಿಗೆ ನವೋದಯ ಸ್ವಸಹಾಯ ಸಂಘಗಳ ಒಕ್ಕೂಟದ ಮಾಸಿಕ ಸಭೆ ಕೊಳ್ತಿಗೆ ಸಿ.ಎ ಬ್ಯಾಂಕ್ ಸಭಾಭವನದಲ್ಲಿ ಒಕೂಟದ ಅಧ್ಯಕ್ಷ ಅಶೋಕ್ ಒರ್ಕೊಂಬುರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೊಳ್ತಿಗೆ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಶ್ಯಾಮ್ ಸುಂದರ ರೈ ಕೆರೆಮೂಲೆ ಮಾತನಾಡಿ ಜನರಲ್ಲಿ ಸ್ವಚ್ಚತೆಯ ಬಗ್ಗೆ ಜನಜಾಗೃತಿ ಮೂಡಿಸುವರೇ ಸ್ವಚ್ಚ ಗ್ರಾಮ ನಿರ್ಮಲ ಭಾರತ ಎಂಬ ಬಗ್ಗೆ ಮಾಹಿತಿ ನೀಡಿದರು. ಸಿ.ಎ ಬ್ಯಾಂಕ್ ಅಧ್ಯಕ್ಷ ವಸಂತ ಕುಮಾರ್ ರೈ ದುಗ್ಗಲ, ಪ್ರೇರಕಿಯರಾದ ಕಲ್ಪವಲ್ಲಿ-ಮತ್ತು ಶಶಿಕಲಾ, ಸಿ.ಎ ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ಹಂಸಾವತಿ, ಒಕ್ಕೂಟ ಕಾರ್ಯದರ್ಶಿ ಪ್ರಭಾಕರ ರೈ ಕೊರಂಬಡ್ಕ ಉಪಸ್ಥಿತರಿದ್ದರು. ಸುನೀತಾ ಪ್ರಾರ್ಥಿಸಿದರು. ಸದಾನಂದ ಕೋರಿಕ್ಕಾರು ಕಾರ್ಯಕ್ರಮ ನಿರೂಪಿಸಿದರು. ಶುಭ ಮತ್ತು ಶ್ರೀರಾಮ ತಂಡದವರು ಸಭೆಯ ಜವಾಬ್ದಾರಿ ವಹಿಸಿದ್ದರು.

LEAVE A REPLY

Please enter your comment!
Please enter your name here