ನಿವೃತ್ತ ಪೊಲೀಸ್ ಮಹಾನಿರ್ದೇಶಕ ಹನುಮಗಿರಿಗೆ ಭೇಟಿ

0

ಪುತ್ತೂರು:ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಖಡಕ್ ಪೊಲೀಸ್ ಆಫೀಸರ್ ಖ್ಯಾತಿಗೆ ಪಾತ್ರರಾಗಿದ್ದ ಶಂಕರ್ ಬಿದರಿ ಇವರು ಶ್ರೀ ಕ್ಷೇತ್ರ ಹನುಮಗಿರಿಗೆ ಭೇಟಿ ನೀಡಿದರು.


ಕ್ಷೇತ್ರದ ನಿರ್ಮಾಣ ಹಾಗೂ ರಾಮಾಯಣ , ಹನುಮಾನ್ ಮಾನಸೋದ್ಯಮದ ಕೆತ್ತನೆಯನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕೋದಂಡರಾಮಸ್ವಾಮಿ ಹಾಗೂ ಪಂಚಮುಖಿ ಆಂಜನೇಯ ಸ್ವಾಮಿಗೆ ಪೂಜೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಧರ್ಮದರ್ಶಿಗಳಾದ ಶಿವರಾಂ ಪಿ ,ಪುತ್ತೂರು ಎನ್ ಆರ್ ಸಿ ಸಿ ಪ್ರಿನ್ಸಿಪಾಲ್ ಆಗಿರುವ ಡಾಕ್ಟರ್ ಮೋಹನ್, ಪುತ್ತೂರು ಠಾಣೆಯ ಎಸ್.ಐ ಶ್ರೀಕಾಂತ್ ರಾಥೋಡ್ ಹಾಗೂ ಈಶ್ವರಮಂಗಲ ಹೊರಠಾಣೆ ಉಪ ನಿರೀಕ್ಷಣಾಧಿಕಾರಿ ಶ್ರೀಧರ್ ರವರು ಉಪಸ್ಥಿತರಿದ್ದರು.


 

LEAVE A REPLY

Please enter your comment!
Please enter your name here