ಕುದ್ಮಾರಿನಲ್ಲಿ ಶ್ರೀ ಪಂಚಲಿಂಗೇಶ್ವರ ಮಹಿಳಾ ಮಂಡಲ ರಚನೆ

0

  • ಗೌರವಾಧ್ಯಕ್ಷೆ ರೇವತಿ ವಾಲ್ತಾಜೆ, ಅಧ್ಯಕ್ಷೆ ಶುಭ ಆರ್.ನೋಂಡ, ಕಾರ್ಯದರ್ಶಿ ಜ್ಞಾನೇಶ್ವರಿ ಬರೆಪ್ಪಾಡಿ

ಕಾಣಿಯೂರು: ಕುದ್ಮಾರಿನಲ್ಲಿ ನೂತನವಾಗಿ ಶ್ರೀ ಪಂಚಲಿಂಗೇಶ್ವರ ಮಹಿಳಾ ಮಂಡಲವು ಅಸ್ತಿತ್ವಕ್ಕೆ ಬಂದಿದ್ದು, ತಾ.ಪಂ.ಮಾಜಿ ಉಪಾಧ್ಯಕ್ಷೆ ಲಲಿತಾ ಈಶ್ವರ ಬರೆಪ್ಪಾಡಿ ಇವರ ನೇತೃತ್ವದಲ್ಲಿ ಸಭೆಯು ಬರೆಪ್ಪಾಡಿ ದ್ವಾಕ್ರ ಕಟ್ಟಡದಲ್ಲಿ ನಡೆಯಿತು.

              ರೇವತಿ ವಾಲ್ತಾಜೆ                  ಶುಭ ಆರ್.ನೋಂಡ                                ಜ್ಞಾನೇಶ್ವರಿ ಬರೆಪ್ಪಾಡಿ

ಮಹಿಳಾ ಮಂಡಲದ ನೂತನ ಅಧ್ಯಕ್ಷರಾಗಿ ಕಾಣಿಯೂರಿನ ವಿನಾಯಕ ಮೆಡಿಕಲ್‌ನ ಮಾಲಕರಾದ ಶುಭ ಆರ್.ನೋಂಡ, ಕಾರ್ಯದರ್ಶಿಯಾಗಿ ಕಾಣಿಯೂರು ರಾಶಿ ಕಾಂಪ್ಲೇಕ್ಸ್‌ನ ಮಾಲಕರಾದ ಜ್ಞಾನೇಶ್ವರಿ ಚಂದ್ರಶೇಖರ್ ಬರೆಪ್ಪಾಡಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಕಾಣಿಯೂರು ಸ.ಹಿ.ಪ್ರಾ.ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ರೇವತಿ ವಾಲ್ತಾಜೆ ಕುದ್ಮಾರು, ಉಪಾಧ್ಯಕ್ಷರಾಗಿ ಉಮ್ಮಕ್ಕ ಅನ್ಯಾಡಿ, ಭವಾನಿ ಉಳವ, ಜತೆಕಾರ್ಯದರ್ಶಿಯಾಗಿ ಲಲಿತಾ ಈಶ್ವರ ಬರೆಪ್ಪಾಡಿ, ಕೋಶಾಧಿಕಾರಿಯಾಗಿ ತಾರಾ ಅನ್ಯಾಡಿ, ಸಹನಾ ನೂಜಿ, ಕ್ರೀಡಾ ಕಾರ್ಯದರ್ಶಿಯಾಗಿ ಉಮೇಶ್ವರಿ ಅಗಳಿ, ಯಶೋದ ಪಾಲೆತ್ತಡಿ, ಸಾಂಸ್ಕೃತಿಕ ಕಾಯದರ್ಶಿಯಾಗಿ ಪವಿತ್ರಾ ನೂಜಿ, ಗೌರಿ ಕಾರ್ಲಾಡಿ, ಸಂಘಟನಾ ಕಾರ್ಯದರ್ಶಿ ಸರಸ್ವತಿ, ಹರ್ಷಿತಾ ಹೊಸವೊಕ್ಲು, ನವ್ಯಾ ಅನ್ಯಾಡಿ ಆಯ್ಕೆಯಾದರು.

LEAVE A REPLY

Please enter your comment!
Please enter your name here