ಒಕ್ಕಲಿಗ ಸ್ವಸಹಾಯ ಟ್ರಸ್ಟಿನಿಂದ ಸಹಾಯ ಧನ ಹಸ್ತಾಂತರ

0

ಪುತ್ತೂರು: ಆಲಂಕಾರು ಗ್ರಾಮದ ನೆಕ್ಕಿಲಾಡಿ ನಿವಾಸಿ ದುಗಲಾಯ ಒಕ್ಕಲಿಗ ಸ್ವಸಹಾಯ ಸಂಘದ ಸದಸ್ಯರಾಗಿದ್ದು ಇತ್ತೀಚಿಗೆ ಅನಾರೋಗ್ಯದಿಂದ ಅಕಾಲಿಕ ಮರಣಹೊಂದಿದ ಹರಿಣಾಕ್ಷಿ ಅವರ ಕುಟುಂಬಕ್ಕೆ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಪುತ್ತೂರು ಇವರ ವತಿಯಿಂದ ಕೊಡಲ್ಪಡುವ ಸಹಾಯ ಧನದ ಚೆಕ್ ಅನ್ನು ಆಲಂಕಾರು ಒಕ್ಕಲಿಗ ಪತ್ತಿನ ಸಹಕಾರ ಸಂಘದ ಮೆನೇಜರಾದ ರೇವತಿಯವರು ಹಸ್ತಾಂತರಿಸಿದರು . ಈ ಸಂದರ್ಭದಲ್ಲಿ ಟ್ರಸ್ಟಿನ ವಲಯ ನಿರ್ದೇಶಕರಾದ ವಿಶ್ವನಾಥ ಗೌಡ ಇಡಾಲ, ಆಲಂಕಾರು ವಲಯದ ಮೇಲ್ವಿಚಾರಕ ವಿಜಯ ಕುಮಾರ್, ವಲಯದ ಪ್ರೇರಕಿ ಲಲಿತಾ ಹಾಗೂ ಬ್ಯಾಂಕಿನ ಸಿಬ್ಬಂದಿ  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here