ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್‌ನ ಜಿಲ್ಲಾ ಸಮಿತಿ ವಾರ್ಷಿಕ ಸಭೆ, ಅಭಿನಂದನಾ ಸಭೆ

0

ಪುತ್ತೂರು: ದ.ಕ. ಜಿಲ್ಲಾ ಸಮಿತಿಯ ವಾರ್ಷಿಕ ಸಭೆ, ಅಭಿನಂದನಾ ಸಭೆಯು ಸೆ.10ರಂದು ಮಂಗಳೂರಿನ ಟೈಲರ್ ಭವನದಲ್ಲಿ ಜರಗಿತು. ಜಿಲ್ಲಾಧ್ಯಕ್ಷ ಜಯಂತ ಉರ್ಲಾಂಡಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಳೆದ ತಿಂಗಳು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಎಲ್ಲಾ 60 ವಲಯದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕೋಶಾಧಿಕಾರಿಗಳು ಹಾಗೂ 8 ಕ್ಷೇತ್ರದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕೋಶಾಧಿಕಾರಿಗಳು ರವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಅಧ್ಯಕ್ಷ ನಾರಾಯಣ ಬಿ.ಎ., ಪ್ರಧಾನ ಕಾರ್ಯದರ್ಶಿ ಪ್ರಜ್ವಲ್‌ಕುಮಾರ್, ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಲಿಗೋದರ್, ಕೋಶಾಧಿಕಾರಿ ಈಶ್ವರ್ ಕುಲಾಲ್, ಉಪಾಧ್ಯಕ್ಷರಾದ ಕೇಶವ ಕದ್ರಿ, ಚಕ್ರೇಶ್ ಅಮಿನ್, ಸುಜಾತ ಭಂಡಾರಿ ಜೊತೆ ಕಾರ್ಯದರ್ಶಿಗಳಾದ ಕುಶಾಲಪ್ಪ ಗೌಡ, ಸದಾನಂದ ಪೂಜಾರಿ, ಚಿತ್ರಾ ಬಿ.ಸಿ., ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ರಮೇಶ್ ಮಾಡೂರು, ಉದಯಕುಮಾರ್ ಕೋಡಿಕಲ್ ಹಾಗೂ ಲೆಕ್ಕಪರಿಶೋಧಕರಾದ ರಘುನಾಥ್ ಬಿ. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here