ಸವಣೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಆರೆಲ್ತಡಿ ಕಿರಿಯ ಪ್ರಾಥಮಿಕ ಶಾಲೆ ಸಮಗ್ರ ದ್ವಿತೀಯ

0

ಪುತ್ತೂರು: ಇತ್ತೀಚಿಗೆ ಸವಣೂರು ಕ್ಲಸ್ಟರಿನ ಬೆಳಂದೂರು ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಆರೆಲ್ತಡಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥೀಗಳು ಕಿರಿಯ ವಿಭಾಗದಲ್ಲಿ ಸಮಗ್ರ ದ್ವಿತೀಯ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಆರಾಧ್ಯ ನಾಲ್ಕನೇ ತರಗತಿ ಲಘು ಸಂಗೀತ ಪ್ರಥಮ, ಭಕ್ತಿ ಗೀತೆ ದ್ವಿತೀಯ. ಜನನಿ 4ನೇ ತರಗತಿ ಕಥೆ ಹೇಳುವುದು ತೃತೀಯ. ಮಹಮದ್ ಆಸಿರ್ ನಾಲ್ಕನೇ ತರಗತಿ ಕ್ಲೇ ಮಾಡ್ಲಿಂಗ್ ಪ್ರಥಮ, ಇಂಗ್ಲಿಷ್ ಕಂಠಪಾಠ ಪ್ರಥಮ. ಮೊಹಮ್ಮದ್ ಅಜ್ಮಲ್ ಚಿತ್ರಕಲೆಯಲ್ಲಿ ತೃತೀಯ. ಹಿರಿಯ ವಿಭಾಗದಲ್ಲಿ ಪ್ರೇಕ್ಷಣ 5ನೇ ತರಗತಿ ಕ್ಲೇ ಮಾಡಲಿಂಗ್ ಪ್ರಥಮ. ಮಹಮ್ಮದ್ ಶಾಹಿ ಲ್ 5 ನೇ ತರಗತಿ ಭಕ್ತಿಗೀತೆ ದ್ವಿತೀಯ, ಹಿತಾ ಶ್ರೀ ಐದನೇ ತರಗತಿ ಲಘು ಸಂಗೀತ ತೃತೀಯ. ವಿಜೇತರಿಗೆ ಹಾಗೂ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕ ವೃಂದಕ್ಕೆ ಶಾಲೆಯ ಎಸ್ ಡಿ ಎಂ ಸಿ ಯವರು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here