ಚಾಲಕನಿಲ್ಲದಿದ್ದಾಗ ಹಿಂದಕ್ಕೆ ಚಲಿಸಿದ ಬಸ್ಸು; ಸಮಯಪ್ರಜ್ಞೆ ಮೆರೆದ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ

0

ಪುತ್ತೂರು: ಚಾಲಕ ಹಾಗೂ ನಿರ್ವಾಹಕನಿಲ್ಲದ ಸಂದರ್ಭ ಪ್ರಯಾಣಿಕರು ತುಂಬಿದ ಬಸ್ಸೊಂದು ಏಕಾಏಕಿ ಹಿಂದಕ್ಕೆ ಚಲಿಸಿದ್ದು, ವಿದ್ಯಾರ್ಥಿಯೋರ್ವನ ಸಮಯಪ್ರಜ್ಞೆಯಿಂದ ಉಂಟಾಗಬಹುದಾದ ದೊಡ್ಡ ಅಪಘಾತವನ್ನು ತಪ್ಪಿಸಿರುವ ಘಟನೆ ಪುತ್ತೂರಿನ ಬಸ್ಸು ನಿಲ್ದಾಣದಲ್ಲಿ ನಡೆದಿದೆ. ಬಾಲಕನ ಸಮಯಪ್ರಜ್ಞೆಯುಳ್ಳ ಈ ಕಾರ್ಯಕ್ಕೆ ಪ್ರಯಾಣಿಕರು ಸೇರಿದಂತೆ ನಾಗರಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಸೆ.13 ರಂದು ಸಂಜೆ 4.25ರ ವೇಳೆ ಉಪ್ಪಿನಂಗಡಿಯತ್ತ ತೆರಳಬೇಕಾದ ವಾಹನ ಸಂಖ್ಯೆ ಕೆಎ21-ಎಫ್0057 ನಂಬರಿನ ಎಕ್ಸ್‌ಪ್ರೆಸ್ ಸರಕಾರಿ ಬಸ್ಸು ಪುತ್ತೂರು ಬಸ್ಸು ನಿಲ್ದಾಣದಲ್ಲಿ ಪ್ರಯಾಣಿಕರು ತುಂಬಿ ಇದ್ದಾಗ ಬಸ್ಸಿನಲ್ಲಿ ಚಾಲಕ ಮತ್ತು ನಿರ್ವಾಹಕರಿಲ್ಲದ ಸಂದರ್ಭದಲ್ಲಿ ಬಸ್ಸು ಏಕಾಏಕಿ ಹಿಂದಕ್ಕೆ ಚಲಿಸಿದ್ದು, ಪ್ರಯಾಣಿಕರು ಬೊಬ್ಬೆ ಹೊಡೆಯುತ್ತಿದ್ದಂತೆ ಚಾಲಕನ ಎಡಬದಿ ಸೀಟಿನಲ್ಲಿದ್ದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ(ಇಸಿಬಿಎ) ವಿಭಾಗದ ವಿದ್ಯಾರ್ಥಿ ಸಿಝಾನ್ ಹಸನ್ ಎಂಬ ಬಾಲಕ ತಕ್ಷಣವೇ ಚಾಲಕನ ಸೀಟಿಗೆ ಜಿಗಿದು ಬ್ರೇಕ್ ಹಿಡಿದಿದ್ದು ಹಿಂದಕ್ಕೆ ಚಲಿಸುತ್ತಿದ್ದ ಬಸ್ಸನ್ನು ನಿಯಂತ್ರಿಸಿದ್ದಾನೆ ಮಾತ್ರವಲ್ಲದೆ ಬಾಲಕನ ಸಮಯ ಪ್ರಜ್ಞೆಯಿಂದ ಸಂಭಾವ್ಯ ಆಗಬಹುದಾದ ದೊಡ್ಡ ಅಪಘಾತವೊಂದರಿಂದ ರಕ್ಷಿಸಿದ್ದಾನೆ.

ಯುವಕನ ಈ ನಡೆಗೆ ಪ್ರಯಾಣಿಕರು ಸೇರಿದಂತೆ ಎಲ್ಲೆಡೆ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ಹಲವು ಜೀವಗಳನ್ನು ಉಳಿಸಿದ ಅಪತ್ಬಾಂಧವೆನಿಸಿಕೊಂಡಿದ್ದಾನೆ. ವಿದ್ಯಾರ್ಥಿ ಸಿಝಾನ್ ಹಸನ್ ಹಲವಾರು ಜೀವಗಳು ಬಸ್ಸಿನಲ್ಲಿರುವಾಗ ಹ್ಯಾಂಡ್ ಬ್ರೇಕ್ ಎಳೆಯದೆ ಬಸ್ಸು ನಿಲ್ಲಿಸಿ ಹೋಗಿದ್ದು ಬಸ್ಸು ಚಾಲಕನ ತಪ್ಪು. ಎಷ್ಟೇ ತುರ್ತಾಗಿದ್ದರೂ ಪ್ರತಿಯೊಬ್ಬ ಚಾಲಕನು ಇವುಗಳ ಬಗ್ಗೆ ಗಮನವಹಿಸಬೇಕು ಎಂದು ಹೇಳಿದ್ದಾನೆ. ಮುಂದುವರೆಸಿ ಮಾತನಾಡಿದ ಸಿಝಾನ್‌ರವರು ತಾನು ತಂದೆಯ ಜೊತೆ ಕಾರು ಚಾಲನೆಯನ್ನು ಕಲಿತ್ತಿದ್ದರಿಂದ ಬಸ್ಸಿನ ಬ್ರೇಕ್ ಹಿಡಿಯಲು ಸಾಧ್ಯವಾಯಿತು ಎಂದು ಹೇಳಿರುತ್ತಾರೆ. ಯುವಕ ಸಿಝಾನ್ ಹಸನ್‌ನ ಈ ಸಮಯ ಪ್ರಜ್ಞೆ ಕಾರ್ಯಕ್ಕೆ ಎಲ್ಲರೂ ಸೆಲ್ಯೂಟ್ ಹೊಡೆಯಲೇ ಬೇಕು. ಯುವಕ ಸಿಝಾನ್ ಹಸನ್‌ರವರು ಉಪ್ಪಿನಂಗಡಿಯ ಉದ್ಯಮಿ ಮೈನಾ ಕ್ಲೋತ್ ಸೆಂಟರ್ ಮಾಲಕ ಸಲಾಂ ಮೈನಾ ರವರ ಪುತ್ರ.

LEAVE A REPLY

Please enter your comment!
Please enter your name here