ಡಾ| ಶ್ರೀಶ ಕುಮಾರ ಎಂ.ಕೆ.ರವರಿಗೆ ಮಾತೃವಿಯೋಗ

0

ಪುತ್ತೂರು : ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕಜೆ ನಿವಾಸಿ, ನಿವೃತ್ತ ಶಿಕ್ಷಕಿ ಶಾರದಾ(82ವ.)ರವರು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಶಾರದಾರವರು ಪುತ್ತೂರು ನೆಲ್ಲಿಕಟ್ಟೆ ಶಾಲೆಯಲ್ಲಿ ಉದ್ಯೋಗ ಆರಂಭಿಸಿ ಬಳಿಕ ಉಪ್ಪಿನಂಗಡಿ, ಬೆಳ್ತಂಗಡಿ ಶಾಲೆ, ಕಾಯರ್‌ಪಾಡಿ ಇಳಂತಿಲ, ವಾಣಿನಗರ, ಅಂಡೆತಡ್ಕ, ಕಾರಿಂಜ ಶಾಲೆಯಲ್ಲಿ ಶಿಕ್ಷಕ ವೃತ್ತಿ ನಡೆಸಿದ್ದರು. ಮೃತರು ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ| ಶ್ರೀಶ ಕುಮಾರ ಎಂ.ಕೆ., ಬೆಂಗಳೂರಿನ ಎಲ್‌ಜಿ ಕಂಪನಿ ಉದ್ಯೋಗಿ ದೇವಿಪ್ರಸಾದ್ ಎಂ.ಕೆ., ಭಾರತೀಯ ನೌಕಾ ಸೇನೆಯ ನಿವೃತ್ತ ಉದ್ಯೋಗಿ ಪ್ರಸ್ತುತ ಮಂಗಳೂರಿನ ಅಂಚೆ ಇಲಾಖೆಯ ಉದ್ಯೋಗಿ ರಾಘವೇಂದ್ರ ಪ್ರಸಾದ, ಬೆಳ್ತಂಗಡಿ ಎಪಿಎಂಸಿ ಮಾಜಿ ಉಪಾಧ್ಯಕ್ಷ ಗಣೇಶ್ ಪ್ರಸಾದ, ಪುತ್ರಿಯರಾದ ವಾಗೀಶ್ವರಿ, ಪ್ರವೀಣ, ರಾಜಲಕ್ಷ್ಮಿರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here