ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವದ ಹಿನ್ನೆಲೆ ವಲಯ ಸಮಿತಿ ರಚನೆ

0

ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ ನಡೆಯಲಿರುವ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ನೇತೃತ್ವದಲ್ಲಿ ಮೈಸೂರಿನಲ್ಲಿ ವಲಯ ಸಮಿತಿಯ ರಚನೆ ಮಾಡಲಾಯಿತು.

ರವಿಶಂಕರ್ ಮೈಸೂರುರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಜೀರ್ಣೋದ್ಧಾರದ ಬಗ್ಗೆ ಕ್ಷೇತ್ರದ ಧರ್ಮದರ್ಶಿಗಳು ಮಾಹಿತಿ ನೀಡಿ ಕ್ಷೇತ್ರದ ಅಭಿವೃದ್ಧಿ ಕಾರ್ಯವು ಯಶಸ್ವಿಯಾಗಿ ನಡೆಯಬೇಕಾದರೆ ಎಲ್ಲರ ಸಹಕಾರ ಅಗತ್ಯ.

ಆದ್ದರಿಂದ ಕ್ಷೇತ್ರದ ಜೀರ್ಣೋದ್ದಾರಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ವಲಯ ಸಮಿತಿಯ ರಚನೆಯನ್ನು ಮಾಡಿ ಎಲ್ಲರಿಗೂ ಕ್ಷೇತ್ರದ ಜಿರ್ಣೋದ್ದಾರದಲ್ಲಿ ಪಾಲುಪಡೆಯಲು ಅವಕಾಶ ಮಾಡಿಕೊಡಲಾಗುವುದು ಎಂದರು.
ಮೈಸೂರು ವಲಯ ಸಮೀತಿಯ ಅಧ್ಯಕ್ಷರಾಗಿ ರವಿಶಂಕರ್ ಮೈಸೂರು, ಕಾರ್ಯದರ್ಶಿ ಯಾಗಿ ಮಲ್ಲಿಕಾರ್ಜುನ ಮೈಸೂರು, ಕೋಶಾಧಿಕಾರಿಯಾಗಿ ಸೌಜನ್ಯ ರವಿಶಂಕರ್ ಮೈಸೂರು ಹಾಗು ಹತ್ತು ಮಂದಿ ಸದಸ್ಯರನ್ನು ಕಾರ್ಯಕಾರಿ ಸದಸ್ಯರನ್ನಾಗಿ ನೇಮಕ ಮಾಡಲಾಯಿತು.

ಬಳಿಕ ಮಾತನಾಡಿದ ರವಿಶಂಕರ್ ಮೈಸೂರುರವರು ಕ್ಷೇತ್ರ ದ ಜೀರ್ಣೋದ್ಧಾರಕ್ಕೆ ನಮ್ಮ ವಲಯದಿಂದ ಸಾಧ್ಯವಾಗುವ ಮಟ್ಟಿಗೆ ಸಹಕಾರ ನೀಡಲಾಗುವುದು ಎಂದರು. ಹರೀಶ್ ಕೊಕ್ಕಡ ಸ್ವಾಗತಿಸಿ, ಪ್ರಭಮಯಿ ಮೈಸೂರು ವಂದಿಸಿದರು.

LEAVE A REPLY

Please enter your comment!
Please enter your name here