ಪೆರಾಬೆ : ಶ್ರೀಗಣೇಶ ಒಕ್ಕಲಿಗ ಸ್ವಸಹಾಯ ಸಂಘ ರಚನೆ

0

ಪುತ್ತೂರು : ಪೆರಾಬೆ ಗ್ರಾಮದ ಸುರುಳಿ ಧರ್ಮಾವತಿ ರವರ ಮನೆಯಲ್ಲಿ ಶ್ರೀಗಣೇಶ ಒಕ್ಕಲಿಗ ಸ್ವಸಹಾಯ ಸಂಘ ರಚನೆ ಮಾಡಲಾಯಿತು. ಆಲಂಕಾರು ವಲಯದ ಒಕ್ಕಲಿಗ ಸೇವಾ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಘದಲ್ಲಿ ಒಟ್ಟು ೮ಜನ ಸದಸ್ಯರು ಸೇರ್ಪಡೆಗೊಂಡರು. ಪ್ರಬಂಧಕರಾಗಿ ಹೇಮಚಂದ್ರ, ಸಂಯೋಜಕರಾಗಿ ಮಧುರ ಆಯ್ಕೆಯಾಗಿದ್ದಾರೆ. ಸಂಘದ ಇತರ ಸದಸ್ಯರಾಗಿ ಹರಿಪ್ರಸಾದ್, ಲತಾ, ರಾಮಣ್ಣಗೌಡ, ದಿವ್ಯ, ಮೋಹನ, ಭಾರತಿ ಸೇರ್ಪಡೆಯಾದರು. ಪೆರಾಬೆ ಒಕ್ಕೂಟದ ಅಧ್ಯಕ್ಷ ಸದಾನಂದ ಗೌಡ ಕುಂಟ್ಯಾನ ಸಂಘದ ಸದಸ್ಯರಿಗೆ ಸಭಾನಡಾವಳಿ ಹಸ್ಥಾಂತರಿಸಿದರು. ಗ್ರಾಮ ಸಮಿತಿ ಅಧ್ಯಕ್ಷ ನಾರಣಪ್ಪ ಗೌಡ ಉಪಸ್ಥಿತರಿದ್ದರು. ಪ್ರೇರಕಿ ಲಲಿತ ಸ್ವಾಗತಿಸಿ ಅಭಿನಂಧಿಸಿದರು.

LEAVE A REPLY

Please enter your comment!
Please enter your name here