ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಬ್ರಹ್ಮಕಲಶೋತ್ವದ ಹಿನ್ನೆಲೆ ಸಾಲೆತ್ತೂರು ವಲಯ ಸಮಿತಿ ರಚನೆ

0

ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ 2023ರ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನದಂತೆ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಕೊಳ್ನಾಡು ಸಾಲೆತ್ತೂರಿ ನಲ್ಲಿ ವಲಯ ಸಮಿತಿಯ ರಚನೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವನಾಥ ಪೂಜಾರಿ ಕಟ್ಟತ್ತಿಲ  ಕೊಳ್ನಾಡು ವಲಯದಿಂದ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವುದಾಗಿ ಭರವಸೆ ನೀಡಿದರು. ಕ್ಷೇತ್ರದ ಜೀರ್ಣೋದ್ಧಾರದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಬಾಳೆಕಲ್ಲು ಕ್ಷೇತ್ರದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಮಾಹಿತಿ ನೀಡಿದರು. ಹರೀಶ್ ಕಾಮಜಾಲು, ಮನೋಜ್ ಕುಮಾರ್ ಸಾಲೆತ್ತೂರು, ಗಣೇಶ್ ಕುಕ್ಕಾಜೆ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಲಯ ಸಮಿತಿಯನ್ನು ರಚಿಸಲಾಯಿತು.

ಸಾಲೆತ್ತೂರು ವಲಯ ಸಮಿತಿಯ ಅಧ್ಯಕ್ಷರಾಗಿ ವಿಶ್ವನಾಥ ಪೂಜಾರಿ ಕಟ್ಟತ್ತಿಲ ಕೋಡಿ, ಕಾರ್ಯದರ್ಶಿಯಾಗಿ ಸುಂದರ ಪೂಜಾರಿ ಮಾವೆ, ಕೋಶಾಧಿಕಾರಿ ರವೀಂದ್ರ ಪೂಜಾರಿ ನೂಜಿಬೈಲು, ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಶೇಖರ ಪೂಜಾರಿ ಮಾವೆ ಅಗರಿ, ಆನಂದ ಪೂಜಾರಿ ಕುಳಾಲು, ಅವಿನಾಶ್ ಕಟ್ಟತ್ತಿಲ, ಚಂದ್ರಹಾಸ ಪೂಜಾರಿ ಉಳಿಯತ್ತಡ್ಕ, ಉದಯ ಪೂಜಾರಿ ಆಗರಿ, ಪ್ರದೀಪ್ ಕುಮಾರ್ ಕೆ., ಈಶ್ವರ ಪೂಜಾರಿ ಮೆದು, ಆಶಿಫ್ ಕುಮಾರ್ ಕೆ.ವಿ., ಜಯರಾಜ್ ಪೂಜಾರಿ ವಾಲ್ತಾಜೆ, ತಿಲಕ್ ಕುಳಾಲು, ಚಂದ್ರಹಾಸ ಪೂಜಾರಿ ವಾಲ್ತಾಜೆ ಮೊದಲಾದವರನ್ನು ಆಯ್ಕೆ ಮಾಡಲಾಯಿತು. ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ರವಿ ಎಸ್.ಎಂ. ಕುಕ್ಕಾಜೆ ವಂದಿಸಿದರು.

LEAVE A REPLY

Please enter your comment!
Please enter your name here