ಬನ್ನೂರು ಶ್ರೀ ಶಿವಪಾರ್ವತಿ ಮಂದಿರದಲ್ಲಿ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಬನ್ನೂರು ಶ್ರೀ ಶಿವಪಾರ್ವತಿ ಮಂದಿರದಲ್ಲಿ ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಸದಸ್ಯರಿಂದ ತಿಂಗಳ ಸರಣಿ ತಾಳಮದ್ದಳೆ ಸೆ.19ರಂದು ಸಂಜೆ ನಡೆಯಿತು.

“ವಾಲಿ ಮೋಕ್ಷ” ಪ್ರಸಂಗದ ತಾಳಮದ್ದಳೆಯ ಹಿಮ್ಮೇಳದಲ್ಲಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಪದ್ಯಾಣ ಶಂಕರನಾರಾಯಣ ಭಟ್, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮ ( ಕಿಶೋರಿ ದುಗ್ಗಪ್ಪ ನಡುಗಲ್ಲು ), ವಾಲಿ ( ಶುಭಾ ಜೆ ಸಿ ಅಡಿಗ ), ಸುಗ್ರೀವ ( ಹರಿಣಾಕ್ಷೀ ಜೆ ಶೆಟ್ಟಿ ), ತಾರೆ ( ಮನೋರಮಾ ಜಿ ಭಟ್ ) ಸಹಕರಿಸಿದರು. ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿ ದುಗ್ಗಪ್ಪ ಯನ್ ವಂದಿಸಿದರು. ಬೇತ ಶ್ರೀಕೃಷ್ಣ ಭಟ್ ಬನ್ನೂರು ಪ್ರಾಯೋಜಿಸಿದರು. ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ , ಮೋಹನ್, ಚಂದ್ರಶೇಖರ್, ಟಿ. ರಂಗನಾಥ ರಾವ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here