ಕೊಡಿಪ್ಪಾಡಿ: ಸಾವಿತ್ರಿ ಮಹಿಳಾ ಭಜನಾ ಮಂಡಳಿಯ ಪ್ರಾರಂಭೋತ್ಸವ

0

ಪುತ್ತೂರು: ಕೊಡಿಪ್ಪಾಡಿ ಶ್ರೀಜನಾರ್ದನ ದೇವಳದ ಆಶ್ರಯದಲ್ಲಿ ಸಾವಿತ್ರಿ ಮಹಿಳಾ ಭಜನಾ ಮಂಡಳಿಯ ಪ್ರಾರಂಭೋತ್ಸವ ಸೆ.18ರಂದು ದೇವಳದಲ್ಲಿ ನಡೆಯಿತು. ದಾಸ ಸಂಕೀರ್ತನೆಕಾರ ರಾಮಕೃಷ್ಣ ಕಾಟುಕುಕ್ಕೆ ಅಧ್ಯಕ್ಷತೆ ವಹಿಸಿದ್ದರು. ಶ್ರೀಜನಾರ್ದನ ದೇವಾಲಯದ ಅಧ್ಯಕ್ಷ ಜನಾರ್ದನ ಎರ್ಕಡಿತ್ತಾಯ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಪುತ್ತೂರು ನವ್ಯಶ್ರೀ ಮಹಿಳಾ ಮಂಡಳಿ ಅಧ್ಯಕ್ಷೆ ಪ್ರೇಮಲತಾ ರಾವ್ ಮತ್ತು ಹಾರಾಡಿ ವನಿತಾ ಸಮಾಜದ ಉಪಾಧ್ಯಕ್ಷೆ ವತ್ಸಲಾ ರಾಜ್ಞೆ ಭಾಗವಹಿಸಿದ್ದರು. ಭಜನಾ ಮಂಡಳಿಯನ್ನು ಸಂಘಟಿಸಿದ್ದ ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ, ನಿವೃತ್ತ ಸಿಡಿಪಿಒ ಶಾಂತಿ ಹೆಗಡೆ ಸ್ವಾಗತಿಸಿ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಗುರುಪ್ರಸನ್ನ ಜೆ.ಕೆ. ವಂದಿಸಿದರು. ಶೋಭಾ ಬಂಗಾರಡ್ಕ ಕಾರ್ಯಕ್ರಮ ನಿರೂಪಿಸಿದರು. ಅನುಜ್ಞಾ ರಾಧಾಕೃಷ್ಣ ಬಲ್ಲಾಳ ಹಾಗೂ ಲಹರಿ ಪ್ರಕಾಶ್ ಕರಂದ್ಲಾಜೆ ಪ್ರಾರ್ಥಿಸಿದರು. ನಿವೃತ್ತ ಮುಖ್ಯಗುರು ಜಗದೀಶ್, ವಕೀಲೆ ಹೀರಾ ಉದಯ್, ವಿಶಾಲಕ್ಷಿ, ಹರಿಣಿ, ಪ್ರಕಾಶ್ ಕರಂದ್ಲಾಜೆ, ಉಪನ್ಯಾಸಕ ಸುಜಿತ್ ಕುಮಾರ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ರಾಮಕೃಷ್ಣ ಕಾಟುಕುಕ್ಕೆ ಭಜನೆ ತರಬೇತಿ ನೀಡಿದರು. ಸಾವಿತ್ರಿ ಮಹಿಳಾ ಭಜನಾ ತಂಡದವರು ರಾಮಕೃಷ್ಣ ಕಾಟುಕುಕ್ಕೆಯವರಿಗೆ ಗುರುವಂದನೆ ನೆರವೇರಿಸಿದರು.

LEAVE A REPLY

Please enter your comment!
Please enter your name here