ಕುಂಬ್ರ: ಮಂದಾರ ಸಂಕೀರ್ಣದ ಆವರಣದಲ್ಲಿ ನಿಲ್ಲಿಸಿದ್ದ ಸೈಕಲ್ ಕಳವು

0

ಪುತ್ತೂರು: ಮಂದಾರ ಸಂಕೀರ್ಣದ ಆವರಣದಲ್ಲಿ ನಿಲ್ಲಿಸಿದ್ದ ಸೈಕಲ್ ಅನ್ನು ಕಳವು ಮಾಡಿದ ಘಟನೆ ಒಳಮೊಗ್ರು ಗ್ರಾಮದ ಕುಂಬ್ರದಿಂದ ವರದಿಯಾಗಿದೆ. ಕುಂಬ್ರದ ಮಂದಾರ ಸಂಕೀರ್ಣದ ಆವರಣದಲ್ಲಿ ನಿಲ್ಲಿಸಿದ್ದ ಸುಂದರ ರೈ ಮಂದಾರರವರ ಪುತ್ರನ ಹರ್ಕ್ಯುಲಸ್ ಸೈಕಲ್ ಸೆ.18ರಂದು ಬೆಳಿಗ್ಗೆ ವೇಳೆ ನೋಡುವಾಗ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.

ಸಾಂದರ್ಭಿಕ ಚಿತ್ರ

ಎಂದಿನಂತೆ ಸೆ.17 ರಂದು ಕೂಡ ಸೈಕಲ್ ಅನ್ನು ತಮ್ಮ ಕಾಂಪ್ಲೆಕ್ಸ್‌ನ ಅಂಗಳದಲ್ಲಿ ನಿಲ್ಲಿಸಲಾಗಿತ್ತು. ಸೆ.18ರಂದು ಬೆಳಿಗ್ಗೆ ನೋಡುವಾಗ ಸೈಕಲ್ ಕಾಣೆಯಾಗಿತ್ತು. ಈ ಬಗ್ಗೆ ಹಲವರಲ್ಲಿ ವಿಚಾರಿಸಿದರೂ ಸೈಕಲ್ ಪತ್ತೆಯಾಗಿಲ್ಲ, ಸೈಕಲ್ ಅನ್ನು ಕಳವು ಮಾಡಲಾಗಿದೆ ಎನ್ನುತ್ತಾರೆ ಸುಂದರ ರೈ ಮಂದಾರರವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸೈಕಲ್‌ನ ಫೋಟೋ ಹಾಕಿ ಸೈಕಲ್ ಪತ್ತೆಯಾದಲ್ಲಿ ನನ್ನ ಮೊಬೈಲ್ ನಂಬರ್ 9980202308 ಗೆ ಸಂಪರ್ಕಿಸುವಂತೆ ವಿನಂತಿಸಿಕೊಂಡಿದ್ದಾರೆ.

ಸ್ಕೂಟರ್ ಕಳವಿಗೂ ಯತ್ನ ನಡೆದಿತ್ತು
ಕುಂಬ್ರದಲ್ಲಿ ಇದೇ ದಿನ ಅಂದರೆ ಸೆ.17ರಂದು ರಾತ್ರಿ ಸ್ಕೂಟರ್ ಕಳವಿಗೂ ಯತ್ನ ನಡೆದಿತ್ತು. ಇಲ್ಲಿನ ದರ್ಬಾರ್ ಹೊಟೇಲ್‌ನ ಮಾಲಕರ ಸ್ಕೂಟರ್ ಅನ್ನು ಕಳ್ಳರು ಕಳವಿಗೆ ಯತ್ನ ನಡೆಸಿದ್ದು ಕೊನೆಗೆ ಹೆಲ್ಮೆಟ್ ಅನ್ನು ಕಳವು ಮಾಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಪೊಲೀಸ್ ದೂರು ನೀಡಲಾಗಿದೆ. ಅಲ್ಲದೆ ಎಂ.ಎ ಆರ್ಕೇಡ್ ಹತ್ತಿರ ನಿಲ್ಲಿಸಿದ್ದ ಬೈಕ್‌ನಿಂದ ಹೆಲ್ಮೆಟ್ ಅನ್ನು ಕಳವು ಮಾಡಿ ಬೇರೆ ಹೆಲ್ಮೆಟ್ ಇಟ್ಟು ಹೋಗಿರುವ ಘಟನೆಯೂ ನಡೆದಿದೆ. ಒಂದೇ ದಿನ ಕಳ್ಳರು ಬೇರೆ ಬೇರೆ ಕಡೆಗಳಲ್ಲಿ ಕೈಚಳಕ ತೋರಿಸಿದ್ದಾರೆ ಎನ್ನುವುದು ತಿಳಿಯುತ್ತದೆ. ಕಳ್ಳರು ತಿಂಗಳಾಡಿ ಮಾರ್ಗವಾಗಿ ಹೋಗಿದ್ದು ಪೊಲೀಸರು ಅಲ್ಲಲ್ಲಿ ಸಿಸಿ ಟಿವಿ ದೃಶ್ಯಾವಳಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

LEAVE A REPLY

Please enter your comment!
Please enter your name here