ನರಿಮೊಗರು ಶಾಲೆಗೆ ಎಸ್.ಜಿ ಗ್ರೂಪ್‌ನ ಮಾಲಕ ಸತ್ಯಶಂಕರ್ ಭಟ್, ಶಾಲಾ ದಾನಿ ಲೋಕಪ್ಪ ಗೌಡ ಭೇಟಿ-ಶಾಲೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ಭರವಸೆ

0

ಪುತ್ತೂರು: ನರಿಮೊಗರು ಸ.ಉ.ಹಿ.ಪ್ರಾ.ಶಾಲೆಗೆ ಬಿ೦ದು ಎಸ್.ಜಿ ಗ್ರೂಪ್‌ನ ಮಾಲಕರಾದ ಸತ್ಯಶಂಕರ್ ಭಟ್ ಹಾಗೂ ಶಾಲಾ ದಾನಿ ಲೋಕಪ್ಪ ಗೌಡ ಕರೆಮನೆರವರು ಭೇಟಿ ನೀಡಿ ಶಾಲೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಶಾಲಾ ಹಿರಿಯ ವಿದ್ಯಾರ್ಥಿ ವೇದನಾಥ ಸುವರ್ಣ, ಎಸ್ ಜಿ ಗ್ರೂಪ್‌ನ ಸಿಬ್ಬಂದಿ ಗಿರೀಶ್, ಶಾಲಾ ಮಕ್ಕಳ ಪೊಷಕರಾದ ಸಲೀಂ ಮಾಯಂಗಳ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣರಾಜ ಜೈನ್, ಸದಸ್ಯ ಪ್ರವೀಣ್ ಆಚಾರ್ಯ, ಹಮೀದ್ ನೆಕ್ಕಿಲು, ಶಾಲಾ ಮುಖ್ಯಗುರು ಜುಸ್ತಿನ ಲಿಡ್ವಿನ್ ಡಿಸೋಜಾ, ದೈ.ಶಿ. ಶಿಕ್ಷಕಿ ಶ್ರೀಲತಾ ಎ ಹಾಗೂ ಶಿಕ್ಷಕಿ ಸ್ನೇಹಲತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here